ನಮ್ಮದು ವಿವೇಕಾನಂದರ ಕೇಸರಿ, ಬಿಜೆಪಿಯವ್ರದ್ದು ಗೋಡ್ಸೆ ಕೇಸರಿ: ಸಿದ್ದರಾಮಯ್ಯ

Public TV
2 Min Read

ಬೆಂಗಳೂರು: ನಾವು ಹಾಕಿರುವ ಚೆಂಡು ಹೂ ಕೇಸರಿ ಅಲ್ಲ. ನಮ್ಮದು ವಿವೇಕಾನಂದರ ಕೇಸರಿ. ಬಿಜೆಪಿ ಅವರದ್ದು, ಸಾರ್ವರ್ಕರ್, ಗೋಡ್ಸೆ ಕೇಸರಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದರು.

ಕಿವಿಯಲ್ಲಿ ಹೂ ಇಟ್ಟುಕೊಂಡೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಜೆಟ್ ಹೇಗಿದೆ ಅಂದ್ರೆ ಮಕ್ಕಳು ಸಾಕಲು ಜವಾಬ್ದಾರಿ ಇಲ್ಲದವರು, ಎಷ್ಟು ಮಕ್ಕಳಾದ್ರು ಹುಟ್ಟಲಿ ಎನ್ನುವವರ ಮನಸ್ಥಿತಿಯಲ್ಲಿ ಇದ್ದಾರೆ. ಬರೀ ಭರವಸೆಯನ್ನು ನೀಡುವುದೇ ಆಗಿದೆ. ಯಾವುದೂ ಈಡೇರಿಕೆ ಆಗಿಲ್ಲ. ಇದು ಪಾರದರ್ಶಕ, ಉತ್ತರದಾಯಿ ಸರ್ಕಾರವೂ ಅಲ್ಲ ಎಂದು ಕಿಡಿಕಾರಿದರು.

ಇದು ನಿರಾಶಾದಾಯಕ ಮತ್ತು ಚುನಾವಣಾ ಬಜೆಟ್ ಆಗಿದೆ. ಇದರಿಂದ ಜನರ ಸಮಸ್ಯೆಗಳು ಬಗೆಹರಿಯುವುದಿಲ್ಲ. ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಹೇಳುತ್ತಾರೆ. ದುಪ್ಪಟ್ಟು ಮಾಡಲು ಯಾವುದೇ ಕಾರ್ಯಕ್ರಮವೂ ಇಲ್ಲ. ಸಾಲ ಹೆಚ್ಚಾಗಲಿದೆ ಹೊರತು ಆದಾಯ ದುಪ್ಪಟ್ಟು ಆಗುವುದಿಲ್ಲ. ಯಾವನೋ ತೇಜಸ್ವಿ ಸೂರ್ಯ ಒಂದು ಹೇಳಿಕೆ ಕೊಟ್ಟಿದ್ದ. ರೈತರ ಸಾಲ ಮನ್ನ ಮಾಡಿದ್ರೇ ದೇಶದ ಉದ್ಧಾರ ಆಗುವುದಿಲ್ಲ ಅಂದಿದ್ದ. ಬಂಡವಾಳ ಶಾಹಿಗಳ ಸಾಲ ಮನ್ನಾ ಮಾಡಬಹುದು. ಈ ಸರ್ಕಾರ ಶ್ರೀಮಂತರ ಪರವಾದ ಬಜೆಟ್ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಸರ್ಕಾರದ ಚುನಾವಣೆ ಬಜೆಟ್ ಆಗಿದೆ. ಇನ್ನೆರಡು ತಿಂಗಳಲ್ಲಿ ಚುನಾವಣೆ ನಡೆಯುತ್ತದೆ. ಬಿಜೆಪಿ (BJP) ಸರ್ಕಾರದ ನಿರ್ಗಮನದ ಬಜೆಟ್ (Budget) ಇದಾಗಿದ್ದು, 3 ಲಕ್ಷದ 9 ಕೋಟಿಯಷ್ಟು ಇದೆ. ಇದರಲ್ಲಿ ಕಳೆದ ಬಜೆಟ್ ಅಲ್ಲಿ ಘೋಷಣೆ ಮಾಡಿದ್ದನ್ನೇ ಪೂರೈಸಿಲ್ಲ. 600 ಭರವಸೆ ಕೊಟ್ಟಿದ್ರು, 90% ಭರವಸೆಗಳು ಪೂರೈಸಿಲ್ಲ ಎಂದು ಗುಡುಗಿದರು. ಇದನ್ನೂ ಓದಿ: ಕಾಂಗ್ರೆಸ್ಸಿಗೆ ಇನ್ಮುಂದೆ ಚೆಂಡು ಹೂವೇ ಶಾಶ್ವತ : ಸಿ.ಟಿ ರವಿ ವ್ಯಂಗ್ಯ

ನಾನು ಕೊನೆಯ ಬಜೆಟ್ ಮಂಡಿಸಿದಾಗ ನಾನು ಐದು ವರ್ಷದಲ್ಲಿ ಏನು ಮಾಡಿದ್ದೇ, ಮುಂದೆ ಏನು ಮಾಡುತ್ತೇನೆ ಎಂದು ಹೇಳಿದ್ದೆ. ಇವರು ಆ ಪ್ರಯತ್ನ ಮಾಡಿಲ್ಲ. ಜನರಿಗೆ ಸುಳ್ಳು ಭರವಸೆಯನ್ನು ನೀಡಿದ್ದಾರೆ. ಯಾವ ಭರವಸೆಯನ್ನು ಕೂಡ ಈಡೇರಿಸುವ ಪ್ರಯತ್ನ ಮಾಡಿಲ್ಲ. ಬಜೆಟ್ ಅಲ್ಲಿ ದಲಿತರಿಗೆ ದೊಡ್ಡ ದ್ರೋಹ ಮಾಡಿದ್ದಾರೆ. ಬಜೆಟ್ ಅಲ್ಲಿ ಸರಿಯಾಗಿ ಹಣವನ್ನು ಬಿಡುಗಡೆ ಮಾಡಿಲ್ಲ ಎಂದರು. ಇದನ್ನೂ ಓದಿ: ರಾಮಮಂದಿರ ನಿರ್ಮಾಣ ಬಿಜೆಪಿ ಕೈಯಲ್ಲಿ ಆಗಲ್ಲ, ನಾನೇ ಮಾಡಬೇಕು: ಹೆಚ್‌ಡಿಕೆ

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *