ಕರ್ನಾಟಕ ಬಜೆಟ್ 2019: ಕಾರ್ಮಿಕರ ಕಣ್ಣೊರೆಸಿದ ಸಿಎಂ

Public TV
2 Min Read

-ಶ್ರಮಿಕ ಸೌರಭ ಯೋಜನೆ, ಸಾರಥಿಯ ಸೂರು

ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಜೆಟ್ ಮಂಡನೆಗೆ ಆಪರೇಷನ್ ಕಮಲದ ಅನಿಶ್ಚಿತತೆ ಅಡ್ಡಿಯೇನೂ ಆಗಿಲ್ಲ. ಮಧ್ಯಾಹ್ನ 12.30 ಸುಮಾರಿಗೆ ಆರಂಭವಾದ ಕಲಾಪದಲ್ಲಿ ಹಣಕಾಸು ಸಚಿವರೂ ಆಗಿರೋ ಕುಮಾರಸ್ವಾಮಿ ಅವರು ಬಜೆಟ್ ಮಂಡನೆ ಆರಂಭಿಸಿದಾಗ ತಕ್ಷಣವೇ ಬಿಜೆಪಿ ಶಾಸಕರು ಸದನದ ಬಾವಿಗೆ ಇಳಿದರು. ಬಜೆಟ್ ಪ್ರತಿಯನ್ನು ಕೊಡ್ಲಿಲ್ಲ ಅಂತ ಸಭಾತ್ಯಾಗ ಮಾಡಿ, ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿದರು. ಇತ್ತ, ಸದನದಲ್ಲಿ ತಮ್ಮ ಕಾರ್ಯ ಮುಂದುವರಿಸಿದ ಕುಮಾರಸ್ವಾಮಿ ಬರೋಬ್ಬರಿ 3 ಗಂಟೆಗಳ ಕಾಲ ಬಜೆಟ್ ಓದಿದರು.

ಶ್ರಮಿಕ ವರ್ಗವಾಗಿರೋ ಕಾರ್ಮಿಕರಿಗೆ ಹಲವಾರು ಅನುಕೂಲಗಳು ಈ ಬಜೆಟ್‍ನಲ್ಲಿ ಇದೆ.
* ಸಿದ್ಧ ಉಡುಪು ಕಾರ್ಖಾನೆಗಳ ಮಹಿಳಾ ಕಾರ್ಮಿಕರಿಗೆ ಶಿಶುಪಾಲನಾ ಕೇಂದ್ರ.
* ಕೆಲಸ ಮಾಡುವಾಗ ಅಪಘಾತದಿಂದ ಮರಣ ಹೊಂದಿದರೆ 2 ಲಕ್ಷ ರೂ. ಪರಿಹಾರ.
* ಕಟ್ಟಡ ನಿರ್ಮಾಣ ಕಾರ್ಮಿಕರು, ಅವಲಂಬಿತರಿಗಾಗಿ “ಶ್ರಮಿಕ ಸೌರಭ ಯೋಜನೆ” (ಮನೆ ನಿರ್ಮಾಣ 5 ಲಕ್ಷ ರೂ. ಗಳವರೆಗೆ ಮುಂಗಡ ಹಣ)
* ಕಾರ್ಮಿಕ ಆರೋಗ್ಯ ಭಾಗ್ಯ ಸೌಲಭ್ಯದಡಿ 1.5 ಲಕ್ಷ ರೂ.ವರೆಗೆ ಚಿಕಿತ್ಸಾ ವೆಚ್ಚ ಮರುಪಾವತಿ

* ಮಕ್ಕಳ ಕಿಂಡರ್ ಗಾರ್ಡನ್/ ಶಾಲಾಪೂರ್ವ/ ನರ್ಸರಿ ಶಿಕ್ಷಣಕ್ಕೆ 2000 ಮತ್ತು 2500 ರೂ. ಸೌಲಭ್ಯ
* ಕಾರ್ಮಿಕರ ಮಕ್ಕಳಲ್ಲಿ ಸ್ವಯಂ ಉದ್ಯೋಗ ಉತ್ತೇಜಿಸಲು 50,000 ರೂ. ಬಡ್ಡಿರಹಿತ ಸಹಾಯಧನ
* ಆಟೋ, ಟ್ಯಾಕ್ಸಿ ಚಾಲಕರಿಗಾಗಿ ಗುಂಪು ವಿಮೆ ಸೌಲಭ್ಯ ( ಜೊತೆಗೆ ಪೆಟ್ರೋಲ್ ಆಟೋಗಳನ್ನು ಎಲೆಕ್ಟ್ರಿಕ್ ಆಟೋಗಳಾಗಿ ಪರಿವರ್ತಿಸಲು ಸಹಾಯಧನ)
* ಅಪಘಾತ ರಹಿತ ಚಾಲಕರಿಗೆ 25 ಸಾವಿರ ಪುರಸ್ಕಾರ (ಪ್ರಾಮಾಣಿಕ, ಅಪಘಾತ ರಹಿತ ವಾಹನ ಚಾಲನೆ ಮಾಡಿದ ಪ್ರತಿ ಜಿಲ್ಲೆಯ ತಲಾ 10 ಚಾಲಕರಿಗೆ ತಲಾ 25 ಸಾವಿರ ರೂ. ಪುರಸ್ಕಾರ.)
* ಬೆಂಗಳೂರಿನ ಆಟೋ, ಟ್ಯಾಕ್ಸಿ ಚಾಲಕರಿಗೆ “ಸಾರಥಿಯ ಸೂರು” ಬಾಡಿಗೆ ಆಧಾರದ ವಸತಿ ಯೋಜನೆ
* ಸಿದ್ಧ ಉಡುಪು ಕಾರ್ಮಿಕರಿಗೆ ಬಾಡಿಗೆ ಆಧಾರದ ವಸತಿ ಯೋಜನೆಗೆ 50 ಕೋಟಿ ರೂ. ಅನುದಾನ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *