ನೀರಾವರಿ ಸೌಲಭ್ಯಗಳನ್ನ ಒದಗಿಸಲು ಸತೀಶ್‌ ಜಾರಕಿಹೊಳಿ ವಿಫಲ : ಹುಂದ್ರಿ ಆರೋಪ

Public TV
1 Min Read

ಚಿಕ್ಕೋಡಿ: ಯಮಕನಮರಡಿ ಮತ ಕ್ಷೇತ್ರದಲ್ಲಿ ನೀರಾವರಿ ಸೌಲಭ್ಯಗಳನ್ನು ಒದಗಿಸಲು ಶಾಸಕ ಸತೀಶ್‌ ಜಾರಕಿಹೊಳಿ ವಿಫಲರಾಗಿದ್ದಾರೆ ಎಂದು ಯಮಕನಮರಡಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಬಸವರಾಜ ಹುಂದ್ರಿ (Basavaraj Hundri) ಆರೋಪಿಸಿದರು.

ಬೆಳಗಾವಿ‌ (Belagavi) ಜಿಲ್ಲೆಯ ಯಮಕನಮರಡಿ ಮತಕ್ಷೇತ್ರದ ಹೆಬ್ಬಾಳ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತ‌ನಾಡಿದ ಅವರು, ಯಮಕನಮರಡಿ‌ ಕ್ಷೇತ್ರದಲ್ಲಿ ಹೀರಣ್ಯಕೇಶಿ, ಮಾರ್ಕೆಂಡಯ ಹಾಗೂ ಘಟಪ್ರಭಾ ಮೂರು ನದಿಗಳಿದ್ದರೂ, ಕ್ಷೇತ್ರದ ಜನ ನೀರಾವರಿ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಶಾಸಕ ಸತೀಶ್‌ ಜಾರಕಿಹೊಳಿ (Satish Jarkiholi) ಅವರು ಕಳೆದ 15 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ‌ಹೀಗಾಗಿ ಜನ ಅವರಿಗೆ ತಕ್ಕ ಪಾಠ ಕಲಿಸಲು ತೀರ್ಮಾನಿಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ಅಶೋಕ್ ಖೇಣಿಗೆ ಟಿಕೆಟ್ ಮಾರಿಕೊಂಡಿದೆ – ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಚಂದ್ರಾಸಿಂಗ್ ಕಿಡಿ

ಈ ಬಾರಿ ಹೆಚ್ಚಿನ ಮತಗಳ ಅಂತರದಿಂದ ಬಿಜೆಪಿ ಗೆಲ್ಲಲಿದೆ. 2013 ಹಾಗೂ 2018 ಎರಡು ಬಾರಿ‌ ನಾನು ಟಿಕೆಟ್ ವಂಚಿತನಾಗಿದ್ದೇನೆ. ಕಳೆದ 10 ವರ್ಷಗಳಿಂದ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿದ್ದೇನೆ. ಈ‌ ಬಾರಿ ಟಿಕೆಟ್ ಸಿಗುವ ವಿಶ್ವಾಸವನ್ನು ಬಸವರಾಜ‌ ಹುಂದ್ರಿ ವ್ಯಕ್ತಪಡಿಸಿದರು. ಇನ್ನೂ ವಿಜಯಪುರ ಶಾಸಕ ಯತ್ನಾಳ ಅವರು ಕೊನೆಯಲ್ಲಿ ಹೊಂದಾಣಿಕೆ ಮಾಡಕೊಳ್ಳಬಾರದು ಎನ್ನುವ ಸಂದೇಶ ನೀಡಿದ್ದಾರೆ. ಅವರ ಮಾತಿಗೆ ಬಿಜೆಪಿ (BJP) ಕಾರ್ಯಕರ್ತರ ಬದ್ಧವಿರುವಂತೆ ಮನವಿ ಮಾಡಿದರು. ಇದನ್ನೂ ಓದಿ: ಸಿಎಂ ಮೀಸಲಾತಿ ಗಿಮಿಕ್ ಕೋರ್ಟ್‍ನಲ್ಲಿ ನಿಲ್ಲುವುದಿಲ್ಲ: ಮುಖ್ಯಮಂತ್ರಿ ಚಂದ್ರು

Share This Article
Leave a Comment

Leave a Reply

Your email address will not be published. Required fields are marked *