ಸಿದ್ದರಾಮಯ್ಯ ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿ ಸ್ಪರ್ಧಿಸಿದ್ರೆ ಒಳ್ಳೆಯದು – ಅಶೋಕ್ ವ್ಯಂಗ್ಯ

Public TV
1 Min Read

– ಟಿಪ್ಪು, ಶಾದಿಭಾಗ್ಯ ಬಿಡೋವರೆಗೂ ಸಿದ್ದರಾಮಯ್ಯ ಗೆಲ್ಲಲ್ಲ ಎಂದ ಸಚಿವ

ಬಳ್ಳಾರಿ: ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಕರ್ನಾಟಕದ 224 ಕ್ಷೇತ್ರಗಳೂ ಸೇಫ್ ಅಲ್ಲ. ಅವರು ಪಾಕಿಸ್ತಾನ (Pakistana), ಅಫ್ಘಾನಿಸ್ತಾನ ಅಥವಾ ಬಾಂಗ್ಲಾದೇಶದಲ್ಲಿ ಸ್ಪರ್ಧಿಸಿದ್ರೆ ಒಳ್ಳೆಯದು ಎಂದು ಸಚಿವ ಆರ್. ಅಶೋಕ್ (R Ashoka) ವ್ಯಂಗ್ಯವಾಡಿದ್ದಾರೆ.

ಬಳ್ಳಾರಿಯಲ್ಲಿಂದು (Bellary) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಕರ್ನಾಟಕದ 224 ಕ್ಷೇತ್ರಗಳಲ್ಲಿ (Constituencies) ಯಾವ ಕ್ಷೇತ್ರವೂ ಸೇಫ್ ಅಲ್ಲ. ಅವರು ಎಲ್ಲಿ ಹೋದರೂ ಸೋಲ್ತಾರೆ. ಹಾಗಾಗಿ ಪಾಕಿಸ್ತಾನ, ಅಫ್ಘಾನಿಸ್ತಾನ ಅಥವಾ ಬಾಂಗ್ಲಾದೇಶದಲ್ಲಿ ಸ್ಪರ್ಧಿಸಿದ್ರೆ ಒಳ್ಳೆಯದು ಎಂದು ಕಾಲೆಳೆದಿದ್ದಾರೆ.

ಸಿದ್ದರಾಮಯ್ಯ ಈಗಾಗಲೇ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಿದ್ದಾರೆ, ಈಗ ಬಾದಾಮಿ ಬಿಟ್ಟು ಓಡಿಬಂದಿದ್ದಾರೆ. ಕೋಲಾರದಲ್ಲಿ ನಿಂತರೂ ಗೆಲ್ಲೋದು ಕಷ್ಟವಿದೆ. ಅವರ ಪಕ್ಷದವರೇ ಸಿದ್ದರಾಮಯ್ಯಗೆ ವಿಲನ್ ಆಗಿದ್ದಾರೆ. ಹಾಗಾಗಿ ಕರ್ನಾಟಕದ 224 ಕ್ಷೇತ್ರಗಳೂ ಅವರಿಗೆ ಸೇಫ್ ಅಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಇತಿಹಾಸದಲ್ಲಿ ಬಂದು ಹೋದವ್ರು 25 ಸಿಎಂ; ಪೂರ್ಣಾವಧಿ ಆಡಳಿತ ಮಾಡಿದವ್ರು ಮೂರೇ ಮಂದಿ

ಟಿಪ್ಪು ಬಿಟ್ಟರೆ ಸೇಫ್ ಆಗಬಹುದು: ಸಿದ್ದರಾಮಯ್ಯ ಅವರು ಎಲ್ಲಿಯವರೆಗೆ ಟಿಪ್ಪು, ಶಾದಿಭಾಗ್ಯ ಬಿಡುವುದಿಲ್ಲವೂ ಅಲ್ಲಿಯವರೆಗೂ ಅವರೂ ರಾಜ್ಯದಲ್ಲಿ ಸೋಲುತ್ತಾರೆ. ಟಿಪ್ಪು ಸುಲ್ತಾನ್ ಬಿಟ್ಟರೆ, ಯಾವುದಾದರೂ ಒಂದು ಕ್ಷೇತ್ರದಲ್ಲಿ ಸೇಫ್ ಆಗಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ‘ದೇಸಾಯಿ’ ಚಿತ್ರಕ್ಕೆ ‘ಲವ್ 360’ ಚಿತ್ರದ ಪ್ರವೀಣ್ ಕುಮಾರ್ ಹೀರೋ

Share This Article
Leave a Comment

Leave a Reply

Your email address will not be published. Required fields are marked *