`ಕಾಂತಾರ’ ಸಕ್ಸಸ್: ದೈವಕ್ಕೆ ಹರಕೆ ತೀರಿಸಿದ ರಿಷಬ್ ಶೆಟ್ಟಿ

Public TV
1 Min Read

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶನ ಮಾಡಿದ್ದ `ಕಾಂತಾರ’ (Kantara Film) ಸಿನಿಮಾ ಸೂಪರ್ ಸಕ್ಸಸ್ ಕಂಡಿದೆ. ಹೊಂಬಾಳೆ ನಿರ್ಮಾಣದ (Hombale Films) ಈ ಚಿತ್ರ ಆಸ್ಕರ್ ಅಂಗಳದವರೆಗೂ ತಲುಪಿದೆ. ಅದ್ಬುತ ಯಶಸ್ಸಿನ ಬಳಿಕ ಸಿನಿಮಾ ತಂಡ ಕೂಡ ದೇವಕ್ಕೆ ಕೋಲ (Daiva Kola) ಕೊಟ್ಟು ಹರಕೆ ತೀರಿಸಿದೆ.

`ಕಾಂತಾರ’ ಚಿತ್ರದ ಯಶಸ್ಸಿನ ನಂತರ ಇತ್ತೀಚೆಗೆ ಮಂಗಳೂರು ಭಾಗದಲ್ಲಿ ಪಂಜುರ್ಲಿ ಕೋಲ (Panjurli Kola) ಕೊಟ್ಟು ಇಡೀ `ಕಾಂತಾರ’ ಚಿತ್ರತಂಡ ಹರಕೆ ತೀರಿಸಿತ್ತು. ರಿಷಬ್ ಶೆಟ್ಟಿ, ಹೊಂಬಾಳೆ ಸಂಸ್ಥೆಯ ರೂವಾರಿ ವಿಜಯ್ ಕಿರಗಂದೂರು, ಸಪ್ತಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ದೈವ ಕೋಲದ ಹರಕೆ ಕ್ಷಣ ಹೇಗಿತ್ತು ಎಂಬುದನ್ನ ಹೊಂಬಾಳೆ ಫಿಲ್ಮ್ಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವರಾಹ ರೂಪಂ ಸಿನಿಮಾದ ಸಾಂಗ್ ಬಳಸಿ, ಈ ವೀಡಿಯೋವನ್ನ ಅಪ್‌ಲೋಡ್ ಮಾಡಿದ್ದಾರೆ. ಇದನ್ನೂ ಓದಿ: `ಶೈಲೂ’ ನಟಿ ಭಾಮಾ ದಾಂಪತ್ಯ ಬದುಕಿನಲ್ಲಿ ಬಿರುಕು?

ನೀವು ಪ್ರಕೃತಿಗೆ ಶರಣಾಗಿ ಮತ್ತು ಜೀವನದಲ್ಲಿ ಯಶಸ್ಸು ಮತ್ತು ಸ್ವಾತಂತ್ರ್ಯವನ್ನು ನಿಮಗೆ ನೀಡಿದ ದೇವರನ್ನು ಆರಾಧಿಸಿ. ಕಾಂತಾರ ತಂಡವು ದೈವದ ನಿಜ ರೂಪವನ್ನು ವೀಕ್ಷಿಸಿತು, ದೈವದ ಆಶೀರ್ವಾದವನ್ನು ಪಡೆಯಿತು ಎಂದು ಹೊಂಬಾಳೆ ಫಿಲ್ಮ್ಸ್ ಮತ್ತು ರಿಷಬ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಹರಕೆ ತೀರಿಸಿದ ಕ್ಷಣಗಳು ಎಂದು ಕೂಡ ಬರೆದಿದ್ದಾರೆ.

 

View this post on Instagram

 

A post shared by Hombale Films (@hombalefilms)

ಕಾಂತಾರ ಸಕ್ಸಸ್‌ಗೆ ದೈವ ಕೋಲದ ವೀಡಿಯೋಗೆ ಅಭಿಮಾನಿಗಳ ಕಾಮೆಂಟ್ ಸುರಿಮಳೆಯೇ ಹರಿದು ಬರುತ್ತಿದೆ. ಹಾಗೆಯೇ ಈ ವೇಳೆ ಆದಷ್ಟು ಬೇಗ `ಕಾಂತಾರ 2’ಗೆ ಚಾಲನೆ ಕೊಡಿ ಎಂದು ಫ್ಯಾನ್ಸ್ ಬೇಡಿಕೆ ಇಟ್ಟಿದ್ದಾರೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *