ಕಾಂತಾರ ಸಿನಿಮಾ ಮಾದರಿ ಘಟನೆ- ಕೋರ್ಟ್‍ನಲ್ಲಿ ನೋಡಿಕೊಳ್ತೇನೆಂದ ದೂರುದಾರ ಸಾವು

Public TV
1 Min Read

ಉಡುಪಿ: ಜಿಲ್ಲೆಯ ಕಾಪು ತಾಲೂಕು ಪಡುಬಿದ್ರಿಯಲ್ಲಿ ಕಾಂತಾರ (Kantara Film) ಚಿತ್ರದ ಮಾದರಿಯಲ್ಲಿ ಘಟನೆಯೊಂದು ನಡೆದಿದೆ.

ಪಡುಹಿತ್ಲು ಜಾರಂದಾಯ ದೈವಸ್ಥಾನ (Jarandaya) ದ ನೇಮೋತ್ಸವ ವಿಚಾರದಲ್ಲಿ ತಗಾದೆ ಇತ್ತು. 500 ವರ್ಷ ಇತಿಹಾಸ ಇರುವ ಈ ದೈವಸ್ಥಾನದಲ್ಲಿ ಸಮಸ್ತರ ಪರವಾಗಿ ಒಂದು ಭಕ್ತ ಸಮಿತಿ ಇತ್ತು. ದೈವಸ್ಥಾನಕ್ಕೆ ಸಂಬಂಧಿಸಿದಂತೆ ಭಕ್ತರ ಗುಂಪೊಂದು ಟ್ರಸ್ಟ್ ರಚನೆ ಮಾಡಿದೆ. ನಮ್ಮ ಟ್ರಸ್ಟ್ (Trust) ನೇತೃತ್ವದಲ್ಲಿ ನೇಮೋತ್ಸವ ನಡೆಯುತ್ತದೆ ಎಂದು ಘೋಷಿಸಿದೆ. ಇದನ್ನೂ ಓದಿ: ಸಂಕ್ರಾಂತಿ ಹಬ್ಬದಂದು ಕಿರುತೆರೆಗೆ ಬರುತ್ತಿದೆ ರಿಷಬ್‌ ನಟನೆಯ `ಕಾಂತಾರ’ ಸಿನಿಮಾ

ಭಕ್ತ ಸಮಿತಿ ಮತ್ತು ಟ್ರಸ್ಟ್ ಕೋರ್ಟ್ ಮೆಟ್ಟಿಲೇರಿದೆ. ಈ ನಡುವೆ ಓರ್ವ ಟ್ರಸ್ಟಿ ಜಯ ಪೂಜಾರಿ ಕೋರ್ಟ್ ಮೆಟ್ಟಿಲೇರಿದ ಮರುದಿನವೇ ಸಾವನ್ನಪ್ಪಿದ್ದಾರೆ. ಇದು ನಮ್ಮ ಜಾರಂದಾಯ ದೈವದ ಶಕ್ತಿ ಕಾರಣಿಕ ಅಂತ ಊರವರು ಹೇಳ್ತಿದ್ದಾರೆ. ಪ್ರಕಾಶ್ ಶೆಟ್ಟಿ ಟ್ರಸ್ಟ್ ರಚನೆಗೆ ಮುಂದಾಳತ್ವ ವಹಿಸಿದವರು ಎಂದು ಗ್ರಾಮಸ್ಥರು ದೂರಿದ್ದಾರೆ. ಈ ನಡುವೆ ಪ್ರಾಣಹಾನಿಯಾದ ಕಾರಣ ವಾರ್ಷಿಕ ನೇಮೋತ್ಸವವನ್ನು ಮುಂದೂಡಲಾಗಿದೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *