ಬಾಹುಬಲಿ ಶೂಟಿಂಗ್ ನಡೆದ ಕೇರಳದ ಕಾಡಲ್ಲಿ `ವಿಷ್ಣುಪ್ರಿಯ’ನ ಸಾಹಸ!

Public TV
1 Min Read

ಹಿಂದೆ ಪಡ್ಡೆಹುಲಿ ಚಿತ್ರದೊಂದಿಗೆ ಮಾಸ್ ಲುಕ್ಕಲ್ಲಿ ನಾಯಕನಾಗಿ ಪಾದಾರ್ಪಣೆ ಮಾಡಿದ್ದವರು ಶ್ರೇಯಸ್. ಮೊದಲ ಚಿತ್ರದಲ್ಲಿಯೇ ಸ್ಟಾರ್ ಗಿರಿ  ದಕ್ಕಿಸಿಕೊಂಡಿದ್ದ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಅವರ ಎರಡನೇ ಚಿತ್ರ ವಿಷ್ಣುಪ್ರಿಯ. ರಾಜ್ಯದ ನಾನಾ ಭಾಗಗಳಲ್ಲಿ ವೇಗವಾಗಿ ಚಿತ್ರೀಕರಣ ನಡೆಸಿಕೊಂಡಿದ್ದ ಚಿತ್ರತಂಡವೀಗ ಕೇರಳದ ಸುಂದರ ತಾಣಗಳಿಗೆ ಶಿಫ್ಟಾಗಿದೆ. ಕಳೆದ ಹತ್ತು ದಿನಗಳಿಂದ ವಿಷ್ಣುಪ್ರಿಯ ಚಿತ್ರದ ಹಾಡುಗಳು ಮತ್ತು ಹೈ ವೋಲ್ಟೇಜ್ ಸಾಹಸ ಸನ್ನಿವೇಶಗಳ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಬಾಹುಬಲಿಯಂಥಾ ಸಿನಿಮಾಗಳ ಚಿತ್ರೀಕರಣ ನಡೆದಿದ್ದ ಸ್ಥಳಗಳಲ್ಲಿಯೇ ಈ ಚಿತ್ರದ ಚಿತ್ರೀಕರಣವೂ ನಡೆಯುತ್ತಿರೋದು ನಿಜವಾದ ಆಕರ್ಷಣೆ.

ಕೇರಳದ ಪ್ರಖ್ಯಾತ ಆದಿರಪಳ್ಳಿ ಜಲಪಾತದಲ್ಲಿ ಈ ಹಿಂದೆ ರಾಜಮೌಳಿ ನಿರ್ದೇಶನದ ಬಾಹುಬಲಿಯ ಚಿತ್ರೀಕರಣ ನಡೆದಿತ್ತು. ಇದೀಗ ಅದೇ ಸ್ಥಳದಲ್ಲಿ ವಿಷ್ಣುಪ್ರಿಯ ಚಿತ್ರದ ಹಾಡಿನ ದೃಶ್ಯಾವಳಿಗಳನ್ನು ಸೆರೆಹಿಡಿಯಲಾಗಿದೆ. ಇನ್ನುಳಿದಂತೆ ಪುಲಿಮುರುಗನ್ ಮತ್ತು ಮಹೇಶ್ ಬಾಬು ಚಿತ್ರಗಳ ಚಿತ್ರೀಕರಣ ನಡೆದಿದ್ದ ಮಹಾಘನಿ ಅರಣ್ಯ ಪ್ರದೇಶದಲ್ಲಿ ವಿಷ್ಣುಪ್ರಿಯನ ಸಾಹಸ ಸನ್ನಿವೇಶಗಳನ್ನು ಚಿತ್ರೀಕರಿಸಿಕೊಳ್ಳಲಾಗುತ್ತಿದೆ. ಇದು ಇಡೀ ಚಿತ್ರದ ಪ್ರಧಾನ ಅಂಶಗಳನ್ನು ಒಳಗೊಂಡಿರುವ ಸಾಹಸ ಸನ್ನಿವೇಶ. ಅದನ್ನು ವಿರಳ ಪ್ರದೇಶದಲ್ಲಿಯೇ ಚಿತ್ರೀಕರಿಸಿಕೊಳ್ಳಬೇಕೆಂದು ನಿರ್ದೇಶಕ ವಿ.ಕೆ. ಪ್ರಕಾಶ್ ಯೋಜನೆ ಹಾಕಿಕೊಂಡಿದ್ದರಂತೆ. ಅದರಂತೆಯೇ ಈಗ ಸಾಂಗವಾಗಿ ಚಿತ್ರೀಕರಣ ಮುಂದುವರೆಯುತ್ತಿದೆ.

ಈ ಹಿಂದೆ ಪಡ್ಡೆಹುಲಿ ಚಿತ್ರದಲ್ಲಿಯೇ ಆಕ್ಷನ್ ಹೀರೋ ಆಗಿ ಮಿಂಚಿದ್ದವರು ಶ್ರೇಯಸ್. ಆ ಮೊದಲ ಚಿತ್ರಕ್ಕಾಗಿ ಅವರು ತಯಾರಿ ಮಾಡಿಕೊಂಡಿದ್ದ ರೀತಿ, ಅದರಲ್ಲಿ ಎನರ್ಜೆಟಿಕ್ ಆಗಿ ನಟಿಸಿದ್ದ ಅವರಿಗಿಲ್ಲಿ ಮತ್ತಷ್ಟು ಮಾಸ್ ಸನ್ನಿವೇಶಗಳಿರೋ ಪವರ್ ಫುಲ್ ಕಥೆಯೇ ಸಿಕ್ಕಿದೆ. ಇಲ್ಲಿ ಕಣ್ಣೇಟಿನ ಹುಡುಗಿ ಪ್ರಿಯಾ ವಾರಿಯರ್ ಶ್ರೇಯಸ್‍ಗೆ ಜೋಡಿಯಾಗಿ ನಟಿಸಿದ್ದಾರೆ. ಇನ್ನೊಂದು ದಿನದ ಚಿತ್ರೀಕರಣ ಸಮಾಪ್ತಿಯಾದರೆ ವಿಷ್ಣುಪ್ರಿಯಾ ಚಿತ್ರೀಕರಣ ಪೂರ್ಣಗೊಳ್ಳಲಿದೆ. ತಕ್ಕಣವೇ ಉಳಿಕೆ ಕೆಲಸ ಕಾರ್ಯಗಳೂ ಆರಂಭವಾಗಲಿವೆ. ಈ ತಿಂಗಳ ಅಂತ್ಯದೊಳಗೆ ಪೋಸ್ಟರ್ ಬಿಡುಗಡೆಗೊಳಿಸಿ ಜನವರಿ ಮೊದಲ ಭಾಗದಲ್ಲಿಯೇ ಆಡಿಯೋ ಮತ್ತು ಟೀಸರ್ ಲಾಂಚ್ ಮಾಡಲು ಚಿತ್ರತಂಡ ತೀರ್ಮಾನಿಸಿದೆ.

Share This Article
Leave a Comment

Leave a Reply

Your email address will not be published. Required fields are marked *