ಲಂಡನ್ ನಲ್ಲಿ ಲಂಬೋದರ: ವಿದೇಶಿ ವ್ಯಾಮೋಹದಿಂದ ದೇಶ ಮರೆತವರ ಮರ್ಮರ!

Public TV
1 Min Read

ಬೆಂಗಳೂರು: ಯಾವುದೇ ಸಿನಿಮಾ ರೂಪಿಸಿದವರೂ ತಮ್ಮ ಚಿತ್ರವನ್ನು ಯಾಕೆ ಜನ ನೋಡಲೇ ಬೇಕು ಅನ್ನೋದಕ್ಕೆ ಬೇಕಾದಷ್ಟು ಕಾರಣಗಳನ್ನ ಕೊಡುತ್ತಾರೆ. ಆದರೆ ಲಂಡನ್ ನಲ್ಲಿ ಲಂಬೋದರ ಚಿತ್ರದ ನಿರ್ದೇಶಕ ರಾಜ್ ಸೂರ್ಯ ಕೊಡೋ ಕಾರಣ ಮಾತ್ರ ತುಸು ಭಿನ್ನ. ಇನ್ನೇನು ಇದೇ ತಿಂಗಳ ಇಪ್ಪತ್ತೊಂಬತ್ತರಂದು ಬಿಡುಗಡೆಗೊಳ್ಳಲಿರೋ ಈ ಚಿತ್ರದ ವಿಶೇಷತೆಗಳು ಎಲ್ಲ ವರ್ಗದ ಪ್ರೇಕ್ಷಕರನ್ನೂ ಸೆಳೆಯುವಂತಿದೆ.

ಈಗ ಹೇಳಿಕೇಳಿ ಥಳುಕು ಬಳುಕಿಗೆ ಬೇಗನೆ ಮಾರು ಹೋಗುವ ಕಾಲ. ಹುಟ್ಟಿದ ನೆಲವನ್ನು ಹಳಹಳಿಸುತ್ತಾ ಹೇಗಾದರೂ ಮಾಡಿ ವಿದೇಶಕ್ಕೆ ಹಾರಿ ಸೆಟಲ್ ಆಗಬೇಕೆಂಬ ಮನಸ್ಥಿತಿಯೇ ಬಹುತೇಕರನ್ನು ಆಳುತ್ತಿದೆ. ಹೀಗೆ ಹುಟ್ಟಿದೂರನ್ನು ತೊರೆದು ವಿದೇಶದಲ್ಲಿ ಬೇರಿಳಿಸಿಕೊಂಡು ತಾಯಿ ಬೇರನ್ನು ಸಂಪೂರ್ಣವಾಗಿ ಮರೆತರೆ ಏನಾಗುತ್ತೆ ಅನ್ನೋದಕ್ಕೆ ಖಂಡಿತವಾಗಿಯೂ ಈ ಚಿತ್ರದಲ್ಲಿ ವಿಶೇಷವಾದ ಉತ್ತರಗಳು ಜಾಹೀರಾಗಲಿವೆ!

ಇನ್ನು ಪಾತ್ರಗಳ ಬಗ್ಗೆ ಹೇಳೋದಾದರೆ ನಿರ್ದೇಶಕರು ಪ್ರತೀ ಪಾತ್ರವನ್ನೂ ಕೂಡಾ ಟ್ರೆಂಡ್ ಸೆಟ್ ಮಾಡುವಂಥಾ ರೀತಿಯಲ್ಲಿ ರೂಪಿಸಿದ್ದಾರಂತೆ. ಸಂಪತ್ ರಾಜ್ ಅವರದ್ದಿಲ್ಲಿ ವಿಶಿಷ್ಟವಾದ ಪಾತ್ರ. ಸಾಧು ಕೋಕಿಲಾ ಕೂಡಾ ಈವರೆಗಿನದಕ್ಕಿಂತಲೂ ಪಕ್ಕಾ ವಿಶೇಷವಾದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರಂತೆ. ನಮ್ಮ ನಡುವೆಯೇ ಇರುವಂತೆ ಭಾಸವಾಗೋ ಈ ಪಾತ್ರಗಳೆಲ್ಲವೂ ತಮ್ಮದೇ ರೀತಿಯಲ್ಲಿ ಕಚಗುಳಿ ಇಡಲಿವೆ ಅನ್ನೋದು ಚಿತ್ರತಂಡದ ಭರವಸೆ.

ಈಗಾಗಲೇ ಲಂಡನ್ ನಲ್ಲಿ ಲಂಬೋದರ ಚಿತ್ರ ಬಹು ನಿರೀಕ್ಷಿತ ಸಿನಿಮಾವಾಗಿ ಹೊರಹೊಮ್ಮಿದೆ. ತಾಂತ್ರಿಕವಾಗಿಯೂ ಶ್ರೀಮಂತಿಕೆಯಿಂದ ಕೂಡಿರೋ ಈ ಸಿನಿಮಾದಲ್ಲಿ ಸ್ಕ್ರೀನ್ ಪ್ಲೇ, ಎಡಿಟಿಂಗ್, ಹಾಡುಗಳು, ಛಾಯಾಗ್ರಹಣ ಸೇರಿದಂತೆ ಎಲ್ಲದರಲ್ಲಿಯೂ ಹೊಸಾ ಪ್ರಯೋಗಗಳನ್ನು ಮಾಡಲಾಗಿದೆ. ಅದರ ಮುದ ಏನೆಂಬುದು ಈ ತಿಂಗಳ ಇಪ್ಪತ್ತೊಂಬತ್ತರಂದು ಜಾಹೀರಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *