ಆಸ್ಟ್ರೇಲಿಯಾದಲ್ಲಿ ಕನ್ನಡ ಭವನ – ಶಾಸಕ ಶರವಣ ಮಹತ್ವದ ಭೇಟಿ

2 Min Read

– ಮೆಲ್ಬೋರ್ನ್ ನಲ್ಲಿ  ಕನ್ನಡ ಭವನದ ಪ್ರಗತಿ ಬಗ್ಗೆ ಚರ್ಚೆ
– ಇದು ಕನ್ನಡಿಗರ ಭಾಷೆ, ಸಂಸ್ಕೃತಿಗೆ ಶಾಶ್ವತ ನೆಲೆ: ಶರವಣ ಬಣ್ಣನೆ

ಮೆಲ್ಬೋರ್ನ್ (ಆಸ್ಟ್ರೇಲಿಯಾ): ಮೆಲ್ಬೋರ್ನ್ (Melbourne) ನಗರದಲ್ಲಿ ಆಸ್ಟ್ರೇಲಿಯಾ ಕನ್ನಡ ಸಂಘದಿಂದ ನಿರ್ಮಾಣ ಹಂತದಲ್ಲಿರುವ ಮಹತ್ವಾಕಾಂಕ್ಷೆಯ ಕನ್ನಡ ಭವನಕ್ಕೆ (Kannada Bhavana) ವಿಧಾನ ಪರಿಷತ್ ಶಾಸಕ ಟಿ.ಎ.ಶರವಣ (T.A. Sharavana) ಇತ್ತೀಚಿಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ನಿಯೋಗವನ್ನು ಅತ್ಯಂತ ಆತ್ಮೀಯವಾಗಿ ಸ್ವಾಗತಿಸಿ, ಭವನದ ನಿರ್ಮಾಣ ಪ್ರಗತಿ ಹಾಗೂ ಉದ್ದೇಶಗಳ ಬಗ್ಗೆ ಮಾಹಿತಿ ನೀಡಿದರು. ಇದನ್ನೂ ಓದಿ: ಟಿಬಿ ಡ್ಯಾಂ| ಕ್ರಸ್ಟ್‌ ಗೇಟ್‌ ಅಳವಡಿಕೆಗೆ ಚಾಲನೆ – ಯಾವುದೇ ವಿಘ್ನ ಬಾರದಿರಲು ಮಹಾ ಸುದರ್ಶನ, ರಕ್ಷಾ ಹೋಮ

ವಿದೇಶಿ ನೆಲದಲ್ಲಿ ಕನ್ನಡದ ಕಂಪು ಪಸರಿಸಲು ಸಂಘವು ಕೈಗೊಂಡಿರುವ ಈ ಕಾರ್ಯವನ್ನು ಶ್ಲಾಘಿಸಿದ ಟಿ.ಎ.ಶರವಣ, ಕನ್ನಡ ಭವನ ನಿರ್ಮಾಣಕ್ಕೆ ವೈಯಕ್ತಿಕವಾಗಿ 5 ಲಕ್ಷ ರೂ. ಕೊಡುವುದಾಗಿ ಘೋಷಿಸಿದರು. ಇದನ್ನೂ ಓದಿ: ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್‌ಗೆ ಕೇರಳ ಹೈಕೋರ್ಟ್‌ನಿಂದ ಮಧ್ಯಂತರ ರಕ್ಷಣೆ

ನಮ್ಮ ನಾಡಿನ ಭಾಷೆ, ಸಂಸ್ಕೃತಿ, ಪರಂಪರೆಗೆ ಆಸ್ಟ್ರೇಲಿಯಾದ ನೆಲದಲ್ಲಿ ಒಂದು ಶಾಶ್ವತ ನೆಲೆ ಸಿಗುತ್ತಿರುವುದು ಪ್ರತಿಯೊಬ್ಬ ಕನ್ನಡಿಗರಿಗೂ ಹೆಮ್ಮೆಯ ವಿಷಯ ಎಂದರು. ಅಲ್ಲದೆ ಇದು ಕೇವಲ ಒಂದು ಕಟ್ಟಡವಲ್ಲ, ಸಮಸ್ತ ಕನ್ನಡಿಗರ ಭಾವನೆಗಳನ್ನು ಜೋಡಿಸುವ ಒಂದು ಸೇತುವೆ ಎಂದು ಭವನದ ಮಹತ್ವವನ್ನು ಒತ್ತಿ ಹೇಳಿದರು. ಇದನ್ನೂ ಓದಿ: ಅಪಘಾತವಾಗಿ ಬಿದ್ದವರ ಮೇಲೆ ಹರಿದ ಟ್ರ್ಯಾಕ್ಟರ್ – ಇಬ್ಬರು ಯುವಕರು ದುರ್ಮರಣ

ಆಸ್ಟ್ರೇಲಿಯಾದಲ್ಲಿ ಈ ಕನ್ನಡ ಭವನ ಸಂಪೂರ್ಣಗೊಂಡರೆ, ವಿದೇಶದ ನೆಲದಲ್ಲಿ ಅತಿದೊಡ್ಡ ಭಾರತೀಯ ಭಾಷಾ ಮತ್ತು ಸಾಂಸ್ಕೃತಿಕ ಕೇಂದ್ರಗಳಲ್ಲಿ ಒಂದಾಗಲಿದೆ. ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಕೆಗೆ, ಕನ್ನಡ ಪರ ಕಲೆ, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ, ನಾಟಕಗಳಂತಹ ಪ್ರದರ್ಶನಗಳಿಗೆ ಇದು ವೇದಿಕೆಯಾಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕೆಲಸದ ನಂತ್ರ ಕರೆ, ಇಮೇಲ್‌ ಬಂದ್‌ – Right to Disconnect Bill ಮಂಡನೆ

ಈ ಭೇಟಿಯ ಸಂದರ್ಭದಲ್ಲಿ ಮಾಜಿ ಸಚಿವರಾದ ಮುರುಗೇಶ್ ನಿರಾಣಿ ಮತ್ತು ವಿಧಾನ ಪರಿಷತ್ ಶಾಸಕಿ ಆರತಿ ಕೃಷ್ಣ ಹಾಗೂ ಇತರ ಗಣ್ಯರು ಜೊತೆಗಿದ್ದರು. ಇದನ್ನೂ ಓದಿ: ಸತತ 20 ಪಂದ್ಯಗಳಲ್ಲಿ ಸೋತು ಕೊನೆಗೂ ಟಾಸ್‌ ಗೆದ್ದ ಭಾರತ

Share This Article