ಬಡ ಕಲಾವಿದರ ಪ್ರೋತ್ಸಾಹ ಧನಕ್ಕೆ ಕನ್ನ – ಹಣ ಬಿಡುಗಡೆ ಆಗಬೇಕಂದ್ರೆ ಕೊಡಬೇಕು ಲಂಚ

Public TV
1 Min Read

ಯಾದಗಿರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಂದರೆ ಕಲೆ, ಸಾಹಿತ್ಯ, ಸಂಸ್ಕೃತಿಗಳ ಮೂಲಕ ಜನರಿಗೆ ನಾಗರಿಕತೆಯತ್ತ ಕೊಂಡೊಯ್ಯುವ ಇಲಾಖೆ ಎನ್ನುವ ಮಾತಿದೆ. ಆದರೆ ಯಾದಗಿರಿ ಈ ಇಲಾಖೆಯ ಮುಖ್ಯಾಧಿಕಾರಿ ನಾಗಕರಿಕತೆ ಇರಲಿ, ಕನಿಷ್ಠ ಮಾನವೀಯತೆ ಸಹ ಇಲ್ಲ.

ದತ್ತಪ್ಪ ಸಾಗನೂರ ಯಾದಗಿರಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮುಖ್ಯಾಧಿಕಾರಿ. ದತ್ತಪ್ಪಗೆ ಬಡ ಕಲಾವಿದರಂದರೆ ಕಿಂಚಿತ್ತೂ ಮರ್ಯಾದೆ ಇಲ್ಲ. ಇಲಾಖೆ ಜಿಲ್ಲೆಯ ಬಡ ಕಲಾವಿದರನ್ನು ಉತ್ತೇಜಿಸುವ ಮತ್ತು ಅವರ ಕಲೆಯನ್ನು ಗುರುತಿಸುವ ಸಲುವಾಗಿ, ಕಲಾವಿದರಿಗೆ ಅವರ ಕಲೆ ಸಂಬಂಧಿಸಿದ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಿ ಅವರಿಗೆ ಗೌರವ ಧನ ನೀಡುತ್ತದೆ.

ಒಂದು ಕಾರ್ಯಕ್ರಮ ಕೊಟ್ಟರೆ ಒಬ್ಬ ಕಲಾವಿದನಿಗೆ 15 ಸಾವಿರ ರೂ. ಗೌರವಧನ ಸಿಗುತ್ತದೆ. ಜಿಲ್ಲೆಯ ಕಲಾವಿದರನ್ನು ಆಯ್ಕೆ ಮಾಡುವ ಜವಾಬ್ದಾರಿ ಇಲಾಖೆ ಮುಖ್ಯಾಧಿಕಾರಿ ದತ್ತಪ್ಪ ಸಾಗನೂರ ಮೇಲಿರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ದತ್ತಪ್ಪ, ಪ್ರತಿ ಕಲಾವಿದನ ಬಳಿ 5 ಸಾವಿರ ಲಂಚ ಪಡೆಯುವುವದು ಈ ಅಧಿಕಾರಿಗೆ ಆಭ್ಯಾಸವಾಗಿದೆ. ಒಂದು ವೇಳೆ ಲಂಚಾವತಾರದ ಬಗ್ಗೆ ಯಾರಾದರೂ ಕಲಾವಿದ ಬಾಯಿ ಬಿಟ್ಟರೆ ಕೋಪಗೊಂಡು ಅವರನ್ನು ಅವಮಾನಿಸೋದು ಅಧಿಕಾರಿಯ ಕೆಲಸ.

ಲಂಚಬಾಕ ಅಧಿಕಾರಿ ಜಿಲ್ಲೆಯ ಹಗಲುವೇಶ ಕಲಾವಿದ ಶಂಕರಪ್ಪ ಶಾಸ್ತ್ರಿ ಎಂಬವರ ಮೇಲೆ ಅವಾಜ್ ಹಾಕಿದ್ದಾರೆ. ಕಿತ್ತು ತಿನ್ನುವ ಬಡತನಕ್ಕೆ ಶಂಕರಪ್ಪ ಶಾಸ್ತ್ರಿಗೆ, ಹಗಲುವೇಷ ಕಲೆ ಜೀವನಾಧಾರ. ಇದಕ್ಕಾಗಿ ಶಂಕರಪ್ಪ ಶಾಸ್ತ್ರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ದತ್ತಪ್ಪ ಸಾಗನೂರ ಹತ್ತಿರ ಕಾರ್ಯಕ್ರಮ ನೀಡಲು ಅವಕಾಶ ಕೇಳಿದ್ದಾರೆ. ಇದಕ್ಕೆ ದತ್ತಪ್ಪ 5 ಸಾವಿರ ರೂ. ಲಂಚ ಕೇಳಿದ್ದಾನೆ. ಈ ವಿಷಯವನ್ನು ಶಂಕರಪ್ಪ ತಮ್ಮ ಕಲಾವಿದ ಸ್ನೇಹಿತರ ಮುಂದೆ ಹಂಚಿಕೊಂಡಿದ್ದಾರೆ. ಈ ವಿಷಯ ತಿಳಿದು ಅಧಿಕಾರಿ ದತ್ತಪ್ಪ ಬಡ ಕಲಾವಿದನಿಗೆ ಕಾಲು ಕೈ ಕತ್ತರಿಸುತ್ತೀನಿ ಎಂದು ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *