ನಟ ದರ್ಶನ್‌ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ ಕೇಸ್‌; ಟೈಮ್‌ಲೈನ್‌ ಹೀಗಿದೆ ನೋಡಿ..

Public TV
2 Min Read

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಹತ್ಯೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್‌ ಸ್ಟಾರ್‌ ನಟ ದರ್ಶನ್‌ (Darshan) ಬಂಧನವು ಪ್ರಕರಣದ ಗಂಭೀರತೆ ಹೆಚ್ಚಿಸಿದೆ. ಪ್ರಕರಣ ಬೆಳಕಿಗೆ ಬಂದಾಗಿನಿಂದ ಸ್ಫೋಟಕ ಮಾಹಿತಿಗಳು ಒಂದೊಂದಾಗಿ ಹೊರಬೀಳುತ್ತಿವೆ. ರೇಣುಕಾಸ್ವಾಮಿ ಅಪಹರಣದಿಂದ ಹಿಡಿದು ಇಲ್ಲಿವರೆಗೆ ಏನೇನಾಯಿತು ಎಂಬ ಬಗ್ಗೆ ಟೈಮ್‌ಮೈನ್‌ ಹೀಗಿದೆ ನೋಡಿ.

ಜೂನ್‌ 7
* ಚಿತ್ರದುರ್ಗದಿಂದ ಸಂಜೆ ರೇಣುಕಾಸ್ವಾಮಿ ಕಿಡ್ನ್ಯಾಪ್
* ರಾತ್ರಿ ಹೊತ್ತಿಗೆ ಪಟ್ಟಣಗೆರೆಯ ಶೆಡ್‌ಗೆ ರೇಣುಕಾಸ್ವಾಮಿ ಶಿಫ್ಟ್‌
* ಇಡೀ ರಾತ್ರಿ ದರ್ಶನ್‌ ಬೆಂಬಲಿಗರು, ಆಪ್ತರಿಂದ ರೇಣುಕಾಸ್ವಾಮಿ ಮೇಲೆ ಹಲ್ಲೆ

ಜೂನ್‌ 8
* ಸತತ 24 ಗಂಟೆಗಳ ಕಾಲ ರೇಣುಕಾಸ್ವಾಮಿಗೆ ಚಿತ್ರಹಿಂಸೆ
* ಹಲ್ಲೆ ವೇಳೆ ನಟ ದರ್ಶನ್‌ ಮತ್ತು ಪವಿತ್ರಾಗೌಡ ಇದ್ದರು ಎಂಬ ಮಾಹಿತಿ

ಜೂನ್‌ 9
* ತೀವ್ರ ಸ್ವರೂಪದ ಹಲ್ಲೆ ಕಾರಣ ರೇಣುಕಾಸ್ವಾಮಿ ನಸುಕಿನಜಾವ ಸಾವು
* ಬೆಳಗಿನ ಜಾವವೇ ಸುಮ್ಮನಹಳ್ಳಿಯ ಮೋರಿ ಬಳಿ ಶವ ಎಸೆದಿದ್ದ ದರ್ಶನ್‌ ಗ್ಯಾಂಗ್‌
* ಬೆಳಗ್ಗೆ 10 ಗಂಟೆಗೆ ರೇಣುಕಾಸ್ವಾಮಿ ಶವ ಪತ್ತೆ ಬಗ್ಗೆ ಪೊಲೀಸರಿಗೆ ಮಾಹಿತಿ
* ರೇಣುಕಾಸ್ವಾಮಿ ಶವದ ಮೇಲೆ 15ಕ್ಕೂ ಹೆಚ್ಚು ಗಾಯಗಳ ಗುರುತು ಪತ್ತೆ
* ರೇಣುಕಾಸ್ವಾಮಿ ಮೂಗು, ಬಾಯಿ, ದವಡೆ ಮೇಲೆ ಸುಟ್ಟಗಾಯ

ಜೂನ್‌ 10
* ಮಧ್ಯಾಹ್ನ 12ರ ಹೊತ್ತಿಗೆ ಶವ ರೇಣುಕಾಸ್ವಾಮಿಯದ್ದು ಎಂದು ಗುರುತಿಸಿದ ಪೊಲೀಸರು.. ಕುಟುಂಬಸ್ಥರಿಗೆ ಮಾಹಿತಿ
* ಸಂಜೆ 4 ಗಂಟೆ ಹೊತ್ತಿಗೆ ರೇಣುಕಾಸ್ವಾಮಿ ಕೊಂದಿದ್ದು ತಾವೇ ಎನ್ನುತ್ತಾ ಪೊಲೀಸರ ಮುಂದೆ ಮೂವರು ಶರಣು
* ರಾತ್ರಿ 8 ಗಂಟೆಗೆ ಪೊಲೀಸರಿಂದ ಮತ್ತೆ ನಾಲ್ವರು ಆರೋಪಿಗಳು ವಶಕ್ಕೆ
* ವಿಚಾರಣೆ ವೇಳೆ ದರ್ಶನ್‌-ಪವಿತ್ರಾಗೌಡ ಹೆಸರು ಬಾಯಿಬಿಟ್ಟ ಆರೋಪಿಗಳು

ಜೂನ್‌ 11
* ಬೆಳಗ್ಗೆ 8.30 ಕ್ಕೆ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ನಟ ದರ್ಶನ್‌ ಅರೆಸ್ಟ್‌
* ಜಿಮ್‌ನಲ್ಲಿ ವರ್ಕೌಟ್‌ ಮುಗಿಸಿ ಹೋಟೆಲ್‌ಗೆ ಬಂದ ದರ್ಶನ್‌ ಅರೆಸ್ಟ್‌
* ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ಠಾಣೆಗೆ ದರ್ಶನ್‌ ಕರೆತಂದು ವಿಚಾರಣೆ
* ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ
* ಸಂಜೆ 7 ಗಂಟೆ ಸುಮಾರಿಗೆ ದರ್ಶನ್‌ ಸೇರಿದಂತೆ 13 ಆರೋಪಿಗಳು 6 ದಿನ ಪೊಲೀಸ್‌ ಕಸ್ಟಡಿಗೆ

Share This Article