ಶಿಥಿಲಾವಸ್ಥೆ ತಲುಪಿದ ಕಂಪ್ಲಿ ಸೇತುವೆ – ನಿಲ್ಲದ ಲಾರಿಗಳ ಸಂಚಾರ

Public TV
1 Min Read

ಬಳ್ಳಾರಿ: ಜಿಲ್ಲೆಯ ಕಂಪ್ಲಿ ತಾಲೂಕಿನ ತುಂಗಭದ್ರಾ ಸೇತುವೆ ನಿರ್ಮಿಸಿ ಸುಮಾರು ವರ್ಷಗಳೇ ಕಳೆದು ಸೇತುವೆ ಶಿಥಿಲಾವಸ್ಥೆ ತಲುಪಿದೆ. ಆದರೆ ಹೊಸ ಸೇತುವೆ ನಿರ್ಮಾಣವಾಗಬೇಕೆಂಬುದು ಕಂಪ್ಲಿ ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ.

ಈ ಸೇತುವೆ ಮೇಲೆ 16.5 ಟನ್ ಗಿಂತ ಹೆಚ್ಚು ವಾಹನಗಳ ಸಂಚಾರವನ್ನು ನಿಷೇಧ ಮಾಡಿ ಆರು ವರ್ಷಗಳೇ ಕಳೆದಿದೆ. ಆದರು ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲಾಧಿಕಾರಿಗಳ ಆದೇಶವಿದ್ದರು ಪಾಲನೆಯಾಗದೆ ಇರುವುದು ಸಾರ್ವಜನಿಕರ ಆರೋಪವಾಗಿದೆ.

ತುಂಗಭದ್ರ ನದಿಗೆ ನೀರು ಬಿಟ್ಟ ಕಾರಣ ಭಾರೀ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಹೊಸ ಬಸ್ ನಿಲ್ದಾಣ ಪ್ರತಿದಿನ ಲಾರಿ ನಿಲ್ದಾಣವಾಗಿ ಮಾರ್ಪಡಾಗಿದೆ. ರಾತ್ರಿ ಹತ್ತು ಗಂಟೆವರೆಗೆ ಲಾರಿಗಳನ್ನು ಪೊಲೀಸರು ನಿಲ್ಲಿಸಿ ನಂತರ ತಹಶೀಲ್ದಾರರ ಆದೇಶವಾಗಿದೆ ಎಂದು ಲಾರಿಗಳನ್ನು ಬಿಡದೆ ಚಾಲಕರಿಂದ ಮಾಮೂಲಿ ವಸೂಲಿ ಮಾಡುತ್ತಿದ್ದಾರೆ. ಬಳಿಕ ಲಾರಿಗಳನ್ನು ಬಿಡಲಾಗುತ್ತಿದೆ ಎಂದು ಚಾಲಕರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳದಲ್ಲಿ ತಹಶೀಲ್ದಾರ ಶರಣಮ್ಮ ಕಾರು ಬಂದ ಸಂದರ್ಭದಲ್ಲಿ ಸಾರ್ವಜನಿಕರು ಕಾರಿಗೆ ಮುತ್ತಿಗೆ ಹಾಕಿ ಅವರ ಜೊತೆ ಮಾತಿನ ಚಕಮಕಿ ಮಾಡಿದ ಘಟನೆಯೂ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *