– ತಡೆಯಾಜ್ಞೆ ಬೆನ್ನಲ್ಲೇ ‘ಅಯೋಗ್ಯ’ ಎಂದು ಪೋಸ್ಟ್ ಹಾಕಿದ ಸೂಲಿಬೆಲೆ
ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಬಗ್ಗೆ ಅವಹೇಳನಕಾರಿ ಪದ ಬಳಕೆ ಮಾಡಿದ ಪ್ರಕರಣದಲ್ಲಿ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ವಿರುದ್ಧ ದಾಖಲಾಗಿದ್ದ ಎಫ್ಐಆರ್ಗೆ ಕಲಬುರಗಿ ವಿಭಾಗೀಯ ಪೀಠ ಮಧ್ಯಂತರ ತಡೆ ನೀಡಿದೆ.
ನ್ಯಾ.ರಾಜೇಂದ್ರ ಬಾದಾಮಿ ಅವರು ಎಫ್ಐಆರ್ಗೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದ್ದಾರೆ. ಬಲವಂತದ ಕ್ರಮವನ್ನು ಜರುಗಿಸಬಾರದು ಎಂದು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಖರ್ಗೆ ವಿರುದ್ಧ ಅವಹೇಳನಕಾರಿ ಪದ ಬಳಕೆ – ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್ಐಆರ್
ಮಲ್ಲಿಕಾರ್ಜುನ ಖರ್ಗೆ ಅವರು ದೂರು ನೀಡಿಲ್ಲ. ರಾಜಕೀಯ ವ್ಯಕ್ತಿ ದೂರು ನೀಡಿರುವುದು. ಜಾತಿನಿಂದನೆ ಮಾಡಿಲ್ಲ. ಜಾತಿನಿಂದನೆ ಹಾಕಲು ಸಾಧ್ಯವಿಲ್ಲ ಎಂದು ವಕೀಲ ಅರುಣ್ ಶಾಂ ವಾದ ಮಂಡಿಸಿದ್ದರು. ವಾದ ಆಲಿಸಿದ ಕೋರ್ಟ್ ಪ್ರಕರಣಕ್ಕೆ ತಡೆ ನೀಡಿದೆ.
‘ಅಯೋಗ್ಯ’ ಎಂದು ಸೂಲಿಬೆಲೆ ಪೋಸ್ಟ್
ಪ್ರಕರಣಕ್ಕೆ ತಡೆಯಾಜ್ಞೆ ನೀಡಿದ ಬೆನ್ನಲ್ಲೇ ಚಕ್ರವರ್ತಿ ಸೂಲಿಬೆಲೆ ಅವರು, ‘ಅಯೋಗ್ಯ’ ಎಂದು ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ. ಇದನ್ನೂ ಓದಿ: ರಾಮ ಮಂದಿರ ಕಟ್ಟಿದ್ದಕ್ಕೆ ಸೇಡು, ಮುಸ್ಲಿಮರ ಓಲೈಕೆಗಾಗಿ ಕರಸೇವಕರ ಬಂಧನ: ಸೂಲಿಬೆಲೆ ಕಿಡಿ