ಕಾಬೂಲ್ ಗುರುದ್ವಾರ ದಾಳಿ: 3 ಗಂಟೆಗಳ ಕಾಲ ದೇವಾಲಯ ರಕ್ಷಿಸಲು ಹೋರಾಡಿದ ತಾಲಿಬಾನ್

Public TV
1 Min Read

ಕಾಬೂಲ್: ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯ(ISKP) ಕಾಬೂಲ್‍ನ ಗುರುದ್ವಾರವನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲು ಪ್ರಯತ್ನಿಸಿದೆ. ಈ ವೇಳೆ ತಾಲಿಬಾನ್ ಯೋಧರು ಅವರ ಜೊತೆ 3 ಗಂಟೆಗಳ ಕಾಲ ಹೋರಾಡಿದ್ದಾರೆ.

ನಮ್ಮ ಪ್ರವಾದಿಯನ್ನು ಅವಮಾನಿಸಿದ ಭಾರತೀಯ ರಾಜಕಾರಣಿಗಳಿಗೆ ಪ್ರತಿಕ್ರಿಯೆ ಎಂದು ಎಎಸ್‍ಕೆಪಿ ಹೇಳಿಕೊಂಡು ಹಿಂದೂ ದೇವಾಲಯಗಳ ಮೇಲೆ ದಾಳಿ ಮಾಡುತ್ತಿದೆ. ಈ ವೇಳೆ ಕಾಬೂಲ್‍ನಲ್ಲಿರುವ ಗುರುದ್ವಾರದ ಮೇಲೆ ಎಎಸ್‍ಕೆಪಿ ದಾಳಿ ಮಾಡಲು ಬಂದಿದ್ದು, ಅವರ ಜೊತೆ ತಾಲಿಬಾನ್ ಯೋಧರು ಮೂರು ಗಂಟೆಗಳ ಕಾಲ ದೇವಾಲಯವನ್ನು ರಕ್ಷಿಸಲು ಹೋರಾಡಿದ್ದಾರೆ. ಆದರೆ ಈ ವೇಳೆ ಉಗ್ರರು ಬಳಸಿದ ಸ್ಫೋಟಕಗಳಿಂದ ಯೋಧರಿಗೆ ಗಂಭೀರವಾಗಿ ಗಾಯವಾಗಿದೆ. ಇದನ್ನೂ ಓದಿ: ಅಗ್ನಿಪಥ್ ಪ್ರತಿಭಟನೆಗಳ ನಡುವೆ, ಅಗ್ನಿವೀರರಿಗೆ ಆನಂದ್ ಮಹೀಂದ್ರಾ ಕೊಟ್ರು ಬಿಗ್ ಆಫರ್ 

ಈ ದಾಳಿಗೆ ಇಂಗಿಮಾಸಿ ಅಬು ಮೊಹಮ್ಮದ್ ಅಲ್-ತಾಜಿಕಿ ನೇತೃತ್ವ ವಹಿಸಿದೆ ಎಂದು ತಿಳಿದುಬಂದಿದೆ. ದೇವಾಲಯವನ್ನು ರಕ್ಷಣೆಗೆ ಮಧ್ಯಪ್ರವೇಶಿಸಲು ಯತ್ನಿಸಿದ ತಾಲಿಬಾನ್ ಯೋಧರೊಂದಿಗೆ ಉಗ್ರಗಾಮಿಗಳು ಮೂರು ಗಂಟೆಗಳಿಗೂ ಹೆಚ್ಚು ಕಾಲ ಹೋರಾಡಿದರು. ನಾಲ್ಕು ಸ್ಫೋಟಕ ಸಾಧನಗಳು ಮತ್ತು ಕಾರ್ ಬಾಂಬ್‍ಗಳನ್ನು ಬಳಸಿ ಯೋಧರಿಗೆ ಹಾನಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಯೋತ್ಪಾದಕ ಗುಂಪು ಕಾಬೂಲ್‍ನಲ್ಲಿ ಹಿಂದೂ ಮತ್ತು ಸಿಖ್ ದೇವಾಲಯಕ್ಕೆ ನುಗ್ಗಿ ಅಲ್ಲಿರುವ ಕಾವಲುಗಾರನನ್ನು ಕೊಲೆ ಮಾಡುತ್ತಿದೆ. ನಂತರ ದೇವಾಲಯದ ಒಳಗಿರುವ ಭಕ್ತರ ಮೇಲೆ ತನ್ನ ಮೆಷಿನ್ ಗನ್ ಮತ್ತು ಹ್ಯಾಂಡ್ ಗ್ರೆನೇಡ್‍ಗಳಿಂದ ಗುಂಡು ಹಾರಿಸಿ ಸಾಯಿಸುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಆತ್ಮಹತ್ಯೆಗೆ ಶರಣಾದ ಬೆಂಗಳೂರಿಗೆ ಸಬ್‍ ಇನ್ಸ್‌ಪೆಕ್ಟರ್

ಶನಿವಾರ ಕಾಬೂಲ್‍ನ ಬಾಗ್-ಎ ಬಾಲಾ ಪಕ್ಕದಲ್ಲಿದ್ದ ಗುರುದ್ವಾರ ಪರ್ವಾನ್‍ನಲ್ಲಿ ಹಲವಾರು ಸ್ಫೋಟಗಳನ್ನು ಸಂಗ್ರಹಿಸಲಾಗಿತ್ತು. ಆದರೆ ಅಫ್ಘಾನ್ ಭದ್ರತಾ ಸಿಬ್ಬಂದಿ ಸ್ಫೋಟಕ ತುಂಬಿದ ವಾಹನವನ್ನು ತಡೆದು ನಿಲ್ಲಿಸುವ ಮೂಲಕ ದೊಡ್ಡ ದುರಂತವನ್ನು ತಪ್ಪಿಸಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *