– ಕೃತ್ಯ ಎಸಗಿದವರಿಗೆ ಸೂಕ್ತ ಶಿಕ್ಷೆ ವಿಧಿಸುವಂತೆ ಆಗ್ರಹ
ಶಿಮ್ಲಾ: ಕೇರಳದಲ್ಲಿ ಗಭಿಣಿ ಆನೆಗೆ ಪೈನಾಪಲ್ನಲ್ಲಿ ಪಟಾಕಿ ಇಟ್ಟ ಕೃತ್ಯ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗಿತ್ತು. ಈ ಕೃತ್ಯ ಎಸಗಿದವರಿಗೆ ಸೂಕ್ತ ಶಿಕ್ಷೆ ವಿಧಿಸುವಂತೆ ಭಾರೀ ಒತ್ತಾಯ ಕೇಳಿ ಬಂದಿತ್ತು. ಇದೀಗ ಹಿಮಾಚಲ ಪ್ರದೇಶದಲ್ಲಿ ಸಹ ಅದೇ ರೀತಿ ಘಟನೆ ನಡೆದಿದ್ದು, ಗೋ ಮಾತೆಯ ಬಾಯಿಗೆ ನೀಡಿದ ಆಹಾರದಲ್ಲಿ ಪಟಾಕಿ ಇಟ್ಟು ಸಿಡಿಸಲಾಗಿದೆ.
ಹಿಮಾಚಲ ಪ್ರದೇಶದ ಬಿಲಾಸ್ಪುರದಲ್ಲಿ ಘಟನೆ ನಡೆದಿದ್ದು, ಈ ಕುರಿತು ಭಾರೀ ಚರ್ಚೆಯಾಗುತ್ತಿದೆ. ಕೇರಳದ ಆನೆ ಸಾವನ್ನಪ್ಪಿದಾಗ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಯಿತು. ಎಲ್ಲರೂ ಮರುಗಿದರು, ಕೃತ್ಯ ಎಸಗಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. ಆದರೆ ಹಿಮಾಚಲ ಪ್ರದೇಶದಲ್ಲಿ ಗೋವಿಗೂ ಅದೇ ಪರಿಸ್ಥಿತಿ ಇದೆ. ಯಾರೂ ಬಗ್ಗೆ ಮಾತನಾಡುತ್ತಿಲ್ಲ ಎಂದು ಟ್ವಿಟ್ಟರ್ ನಲ್ಲಿ ಚರ್ಚೆ ನಡೆಯುತ್ತಿದೆ. ಈ ವಿಷಯ ಇದೀಗ ಟಾಪ್ ಟ್ರೆಂಡಿಂಗ್ನಲ್ಲಿದ್ದು, ಹ್ಯಾಷ್ಟ್ಯಾಗ್ನೊಂದಿಗೆ ಜಸ್ಟಿಸ್ ಫಾರ್ ನಂದಿನಿ ಎಂದು ಟ್ವೀಟ್ ಮೂಲಕ ಆಗ್ರಹಿಸುತ್ತಿದ್ದಾರೆ.
#JusticeforNandini pic.twitter.com/BVC58Ra7Z1
— Aman Singh (@AmanSin23996197) June 7, 2020
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಂದ್ ಲಾಲ್ನನ್ನು ಶನಿವಾರ ಬಂಧಿಸಲಾಗಿದ್ದು, ಆರೋಪಿ ಗೋವಿನ ಮಾಲೀಕರಿರುವ ಏರಿಯಾದವನಾಗಿದ್ದಾನೆ. ಗೋವಿನ ಬಾಯಿ ಅರ್ಧ ಸುಟ್ಟು ಹೋಗಿದೆ. ಈ ವಿಡಿಯೋವನ್ನು ಗೋವಿನ ಮಾಲೀಕ ಗುರ್ದಾಯಿಲ್ ಸಿಂಗ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ. ಇದೀಗ ಗೋವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ಘಟನೆ ನಡೆದ ಕೆಲವೇ ದಿನಗಳಲ್ಲಿ ಗೋವು ಕರುವಿಗೆ ಜನ್ಮ ನೀಡಿದೆ ಎಂದು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
We call her mataa and treat her like a mother and if she need food we give her bomb and the worst part is she still believe in us she always love us and we human the most intelligent species will always show how sick minded species we are…#JusticeforNandini pic.twitter.com/3VBnVretKF
— Sid.Rai.679 (@679Rai) June 7, 2020
ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಮಾಚಲ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಲಾಸ್ಪುರ ಎಸ್ಪಿ ದಿವಾಕರ್ ಶರ್ಮಾ ಈ ಕುರಿತು ಮಾಹಿತಿ ನೀಡಿ, ಮೇ 26ರಂದು ಐಪಿಸಿ ಸೆಕ್ಷನ್ 286 ಹಾಗೂ ಪ್ರಾಣಿಗಳ ವಿರುದ್ಧ ಕ್ರೌರ್ಯ ತಡೆ ಕಾಯ್ದೆಯ ಸೆಕ್ಷನ್ 11ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒರ್ವ ಆರೋಪಿಯನ್ನು ಬಂಧಿಸಲಾಗಿದೆ.