`ಸೀತಾರಾಮಂ’ ನಿರ್ದೇಶಕನ ಹೊಸ ಚಿತ್ರಕ್ಕೆ ಜ್ಯೂ.ಎನ್‌ಟಿಆರ್ ಸಾಥ್

Public TV
1 Min Read

ವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ(Puneeth Rajkumar) ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನ ನೀಡಲಾಯಿತು. ಈ ಸಮಾರಂಭದಲ್ಲಿ ಅಪ್ಪು ಸ್ನೇಹಿತನಾಗಿ ಬೆಂಗಳೂರಿಗೆ ಬಂದು ಕಾರ್ಯಕ್ರಮಕ್ಕೆ ಸಾಥ್ ನೀಡಿದ್ದರು. ಈ ಬೆನ್ನಲ್ಲೇ ಜ್ಯೂ.ಎನ್‌ಟಿಆರ್ (Jr.Ntr) ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಪುನೀತ್ ಸಾಧನೆ ಮತ್ತು ಸಮಾಜಮುಖಿ ಕಾರ್ಯವನ್ನ ನೋಡಿ, ಅಪ್ಪುಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಯಿತು. ಪುನೀತ್ ಮೇಲಿನ ಪ್ರೀತಿಗಾಗಿ ಟಾಲಿವುಡ್ ನಟ ಜ್ಯೂ.ಎನ್‌ಟಿಆರ್ ಬೆಂಗಳೂರಿಗೆ ಆಗಮಿಸಿ, ಈ ಸಂಭ್ರಮಕ್ಕೆ ಸಾಕ್ಷಿಯಾಗಿದ್ದರು. ಅಪ್ಪು ಮೇಲಿನ ತಾರಕ್ ಪ್ರೀತಿ, ಕನ್ನಡದ ಮೇಲಿರುವ ಅಭಿಮಾನ ಕಂಡು ಫ್ಯಾನ್ಸ್ ಕೂಡ ಫಿದಾ ಆಗಿದ್ದರು. ಬೆಂಗಳೂರಿಂದ ಹಿಂದಿರುಗಿದ ಬೆನ್ನಲ್ಲೇ `ಸೀತಾರಾಮಂ'(Seetharamam) ನಿರ್ದೇಶಕನ ಜೊತೆ ತಾರಕ್ ಕೈ ಜೋಡಿಸಿದ್ದಾರೆ.

`ಆರ್‌ಆರ್‌ಆರ್’ ಸೂಪರ್ ಸಕ್ಸಸ್ ನಂತರ ಇದೀಗ ಮತ್ತೊಂದು ಹೊಸ ಪ್ರಾಜೆಕ್ಟ್ಗೆ ಓಕೆ ಎಂದಿದ್ದಾರೆ. ಸೀತಾರಾಮಂ ನಿರ್ದೇಶಕನ ಹನು ರಾಘವಪುಡಿ ಜೊತೆ ಹೊಸ ಚಿತ್ರ ಮಾಡಲಿದ್ದಾರೆ. ಒಂದು ಸುತ್ತಿನ ಚರ್ಚೆಯಾಗಿತ್ತು. ಸದ್ಯದಲ್ಲೇ ಚಿತ್ರದ ಕುರಿತು ಅಧಿಕೃತ ಅಪ್‌ಡೇಟ್ ನೀಡಲಿದ್ದಾರೆ. ಇದನ್ನೂ ಓದಿ:ಅನುಪಮಾ ಗೌಡ ವಿರುದ್ಧ ಸಿಡಿದೆದ್ದ ರೂಪೇಶ್‌ ರಾಜಣ್ಣ

ಅಂದ್ಹಾಗೆ, ದುಲ್ಕರ್ ಮತ್ತು ಮೃಣಾಲ್ ನಟನೆಯ `ಸೀತಾರಾಮಂ’ ಈ ವರ್ಷದ ಸೂಪರ್ ಹಿಟ್ ಚಿತ್ರವಾಗಿದ್ದು, ಇದೀಗ ಈ ಚಿತ್ರದ ನಿರ್ದೇಶಕನ ಜೊತೆ ತಾರಕ್‌ ಸಾಥ್‌ ನೀಡಿದ್ದಾರೆ. ಹನು ರಾಘವಪುಡಿ ಡೈರೆಕ್ಷನ್‌ನಲ್ಲಿ ಯಂಗ್‌ ಟೈಗರ್‌ ತಾರಕ್‌ ನಟನೆ ಮಾಡಲಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *