ಹುಬ್ಬಳ್ಳಿಯಲ್ಲಿ ಜೂನಿಯರ್ ಹನುಮಂತ

Public TV
1 Min Read

ಧಾರವಾಡ/ಹುಬ್ಬಳ್ಳಿ: ಸರಿಗಮಪ ಖ್ಯಾತಿಯ ಸಿಂಗರ್ ಹನುಮಂತ ಈಗ ಫುಲ್ ಫೇಮ್ ಆಗಿದ್ದಾರೆ. ಅದೆಷ್ಟರ ಮಟ್ಟಿಗೆ ಅಂದರೆ ಇವರು ಎಲ್ಲಿ ಹೋದ್ರೂ ಸೆಲ್ಫಿ ತೆಗೆದುಕೊಳ್ಳಲು ಜನ ಮುಗಿಬೀಳ್ತಿದ್ದಾರೆ. ಈ ಸಿಂಗರ್ ಹನುಮಂತನ ಖ್ಯಾತಿ ಇಲ್ಲೊಬ್ಬ ಯುವಕನಿಗೆ ತಲೆ ನೋವು ತಂದೊಡ್ಡಿದೆ.

ಹುಬ್ಬಳ್ಳಿ ತಾಲೂಕಿನ ಕಟ್ನೂರ್ ಗ್ರಾಮದ ನಿವಾಸಿ ಪ್ರಕಾಶ್ ಅಂಗಡಿ ಎಂಬ ಯುವಕ ನೋಡೋದಕ್ಕೆ ಹನುಮಂತನನ್ನ ಹೋಲುತ್ತಾರೆ. ಪ್ರಕಾಶ್ ಎಲ್ಲೇ ಹೋದರು ಜನರು ಹನುಮಂತ ಎಂದು ಸೆಲ್ಫಿ ತೆಗೆದುಕೊಳ್ಳಲು ಮುಗಿದುಬೀಳುತ್ತಾರೆ. ಕೊನೆಗೆ ನಾನು ಹನುಮಂತ ಅಲ್ಲ ಎಂದು ಹೇಳಿ ಜನರ ಗುಂಪಿನಿಂದ ಹೊರ ಬರುವಂತಾಗಿದೆ ಎಂದು ಪ್ರಕಾಶ್ ಹೇಳುತ್ತಾರೆ.

ಕಾಲೇಜಿನಲ್ಲಿ ಸ್ನೇಹಿತರು ಸಹ ಪ್ರಸನ್ನನನ್ನು ಜೂನಿಯರ್ ಹನುಮಂತ ಎಂದೇ ಕರೆಯುತ್ತಿದ್ದಾರೆ. ಎರಡು ದಿನಗಳ ಹಿಂದೆ ಹಾವೇರಿಯ ಸಂತ ಶಿಶುನಾಳ ಜಾತ್ರೆಗೆ ತೆರಳಿದಾಗ ಜನ ಇವರನ್ನೇ ಹನುಮಂತ ಅಂತಾ ತಿಳಿದು ಸೆಲ್ಪಿ ಸೆಲ್ಫಿ ತೆಗೆದುಕೊಂಡಿದ್ದರು. ಗ್ರಾಮದಲ್ಲಿಯೂ ಬಹುತೇಕ ಜನರು ಜೂ.ಹನುಮಂತ ಎಂದು ಕರೆಯಲಾರಂಭಿಸಿದ್ದಾರೆ. ಒಂದು ಕಡೆ ದಿನೇ ದಿನೇ ಹನುಮಂತನ ಖ್ಯಾತಿ ಹೆಚ್ಚಾಗ್ತಿದ್ರೆ, ಇತ್ತ ಪ್ರಸನ್ನಗೆ ಸೆಲ್ಫಿ ಕಾಟವೂ ಜೋರಾಗುತ್ತಿದೆ.

https://www.youtube.com/watch?v=g_McGuvUxAQ

Share This Article
Leave a Comment

Leave a Reply

Your email address will not be published. Required fields are marked *