ಜೋ ಜೀತಾ ವೋ ಹೀ ಸಿಖಂದರ್- ಬಿಜೆಪಿ ಗೆಲುವಿಗೆ  ಸ್ಮೃತಿ ಇರಾನಿ ಹೇಳಿಕೆ

Public TV
1 Min Read

ನವದೆಹಲಿ: ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಜಯಭೇರಿ ಹಿನ್ನೆಲೆಯಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆಯ ಸಚಿವೆ ಸ್ಮೃತಿ ಇರಾನಿ ಪ್ರತಿಕ್ರಿಯೆ ನೀಡಿದ್ದು, ಜೋ ಜೀತಾ ವೋ ಹೀ ಸಿಖಂದರ್ ಎಂದು ಹೇಳಿದ್ದಾರೆ.

ಇದು ಅಮಿತ್ ಶಾ ಅವರ ನಾಯಕತ್ವ ಹಾಗೂ ಅಭಿವೃದ್ಧಿಯ ಗೆಲುವು. ನಮ್ಮ ಆಡಳಿತ ಹಾಗೂ ಸಂಘಟನೆಗೆ ಸಿಕ್ಕ ಜಯ ಎಂದು ಹೇಳಿದ್ದಾರೆ. ಬೂತ್ ಮಟ್ಟದಿಂದ ಹಿಡಿದು ಎಲ್ಲಾ ಕಾರ್ಯಕರ್ತರಿಗೆ ಈ ಗೆಲುವನ್ನ ಸಮರ್ಪಿಸಿದ್ದಾರೆ.

ಬೆಳಗ್ಗೆ ಆರಂಭದ ವೇಳೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟ ಬಗ್ಗೆ ಪ್ರಶ್ನಿಸಿದ್ದಕ್ಕೆ, ಜೋ ಜೀತಾ ವೋ ಹೀ ಸಿಖಂದರ್(ಯಾರು ಗೆಲ್ತಾರೋ ಅವರೇ ರಾಜ)ಎಂದು ನನಗೆ ಅನ್ನಿಸುತ್ತದೆ ಎಂದು ಉತ್ತರಿಸಿದ್ರು. ಇದೇ ವೇಳೆ ಬಿಜೆಪಿ ಕಚೇರಿ ಬಳಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿದ್ರು.

ಮೋದಿ ತವರಾದ ಗುಜರಾತ್‍ನಲ್ಲಿ 1995 ರಿಂದಲೂ ಬಿಜೆಪಿ ಸತತವಾಗಿ ಜಯ ಗಳಿಸುತ್ತಾ ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *