ಚಿಕ್ಕಮಗಳೂರಿಗೆ ಇಂದು ಜಿಗ್ನೇಶ್ ಮೇವಾನಿ ಆಗಮನ- ಮೋದಿ ಕರ್ನಾಟಕ ಕನಸಿಗೆ ಆಗುತ್ತಾ ಅಡ್ಡಿ?

Public TV
1 Min Read

ಚಿಕ್ಕಮಗಳೂರು: ಕಾಂಗ್ರೆಸ್ ಮುಕ್ತ ದೇಶ ನಿರ್ಮಿಸೋ ಬಿಜೆಪಿ ನಾಯಕರಿಗೆ ಗುಜರಾತ್ ದಲಿತ ನಾಯಕ ಜಿಗ್ನೇಶ್ ಮೇವಾನಿ ಅಡ್ಡಿಯಾಗ್ತಿದ್ದಾರಾ ಅನ್ನೋ ಪ್ರಶ್ನೆ ಬಿಜೆಪಿ ವಲಯದಲ್ಲಿ ಎದ್ದಿದೆ. ಯಾಕಂದ್ರೆ ಮೋದಿಯ ನಾಗಾಲೋಟಕ್ಕೆ ಗುಜರಾತ್‍ನಲ್ಲಿ ಕೊಂಚ ಮಟ್ಟಿಗೆ ತಡೆಯೊಡ್ಡಿರೋ ಜಿಗ್ನೇಶ್ ಮೇವಾನಿ ಇದೀಗ ಕರ್ನಾಟಕಕ್ಕೆ ಬರ್ತಿದ್ದಾರೆ.

ಗುಜರಾತ್ ಬಳಿಕ ಕರ್ನಾಟಕದ ಮೇಲೆ ಕಣ್ಣು ನೆಟ್ಟಿರೋ ಬಿಜೆಪಿ ನಾಯಕರಿಗೆ ಮೇವಾನಿ ಕೊಂಚ ತಲೆ ಬಿಸಿ ಮಾಡಿದ್ದಾರೆ ಎನ್ನಲಾಗ್ತಿದೆ. ಇದೀಗ ಕೋಮು ಸೌಹಾರ್ದ ವೇದಿಕೆಗೆ 15 ವರ್ಷ ತುಂಬಿರೋ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿಗೆ ಜಿಗ್ನೇಶ್ ಇವತ್ತು ಬರ್ತಿದ್ದಾರೆ.

ಈ ವೇಳೆ, ಬಡವರು, ದಲಿತರು, ಹಿಂದುಳಿದ ವರ್ಗಗಳ ಪರ ಜಿಗ್ನೇಶ್ ವೀರಾವೇಶದ ಭಾಷಣ ಮಾಡಲಿದ್ದಾರೆ. ಈ ಮೂಲಕ ಪ್ರಧಾನಿ ರಾಜ್ಯದಲ್ಲೇ ಗೆದ್ದ ಮೇವಾನಿಯ ಭಾಷಣದಿಂದ ಮತ್ತೊಮ್ಮೆ ಕರ್ನಾಟಕದಲ್ಲೂ ಮೋದಿಯ ನಿಲುವಿಗೆ ಮುಖಭಂಗವಾಗುತ್ತಾ ಅನ್ನೋದು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *