ಕಿಡಿಗೇಡಿಗಳ‌ ದುಷ್ಕೃತ್ಯಕ್ಕೆ ಆಲೆಮನೆ ಧಗಧಗ

Public TV
1 Min Read

ಚಾಮರಾಜನಗರ: ಕಿಡಿಗೇಡಿಗಳ ಕೃತ್ಯಕ್ಕೆ ಆಲೆಮನೆಯೊಂದು(Alemane) ಧಗಧಗಿಸಿ ಹೊತ್ತಿ ಉರಿದ ಘಟನೆ ಚಾಮರಾಜನಗರ ತಾಲೂಕಿನ ದೊಡ್ಡಮೋಳೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಾರಾಯಣ ಎಂಬುವರ ಜಮೀನಿನಲ್ಲಿದ್ದ ಆಲೆಮನೆ ಹೊತ್ತಿ ಉರಿದಿದ್ದು, ಅಲ್ಲೇ ಪಕ್ಕ ನಿಲ್ಲಿಸಿದ್ದ ಟ್ರ್ಯಾಕ್ಟರ್, ಬೆಲ್ಲ(Jaggery) ತಯಾರಿಸುವ ಪರಿಕರಗಳು, ಕಬ್ಬು ಅರೆಯುವ ಯಂತ್ರ, ಮೋಟಾರ್​ ಬೆಂಕಿಗೆ ಸುಟ್ಟು ಕರಕಲಾಗಿವೆ.‌ ಇದನ್ನೂ ಓದಿ: ಗಣೇಶನ ಪ್ರಸಾದಕ್ಕೆ ಫುಲ್ ಡಿಮ್ಯಾಂಡ್ – 12 ಕೆಜಿ ಲಡ್ಡು 60 ಲಕ್ಷಕ್ಕೆ ಹರಾಜು

ಬೆಂಕಿ ಅವಘಡದ ಮಾಹಿತಿ ಅರಿತ ಚಾಮರಾಜನಗರ ಅಗ್ನಿಶಾಮಕ ದಳದ ರಾಮಚಂದ್ರಮೂರ್ತಿ ಮತ್ತು ತಂಡ ಎರಡು ತಾಸು ಕಾರ್ಯಾಚರಣೆ ಕೈಗೊಂಡು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಆಗಿರುವ ನಷ್ಟಕ್ಕೆ ಪರಿಹಾರ ಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಘಟನೆ ಸಂಬಂಧ ಚಾಮರಾಜನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *