ದಾರಿಯಲ್ಲಿ ಸಿಕ್ಕಿದ್ದ ಚಿನ್ನವನ್ನು ಪೊಲೀಸರಿಗೆ ಒಪ್ಪಿಸಿದ ಗ್ರಾ.ಪಂ ಸದಸ್ಯ

Public TV
1 Min Read

ತುಮಕೂರು: ಮಧುಗಿರಿ-ಕೊರಟಗೆರೆಯ ಕೆಶಿಪ್ ರಸ್ತೆಯಲ್ಲಿ ಬಿದ್ದಿದ್ದ ಬ್ಯಾಗ್‍ನಲ್ಲಿದ್ದ ಅಂದಾಜು ನಲವತ್ತೈದು ಗ್ರಾಂ ಚಿನ್ನಾಭರಣಗಳನ್ನು ಗ್ರಾಮ ಪಂಚಾಯಿತಿ ಸದಸ್ಯ ರೊಬ್ಬರು ನೋಡಿ ನಂತರ ಮಧುಗಿರಿ ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಕಾಟಗಾನಹಟ್ಟಿ ಗ್ರಾಮ ಪಂಚಾಯಿತಿ ಸದಸ್ಯ ಶಿವಾನಂದರವರು ಬೆಳಿಗ್ಗೆ 7:30 ರ ಸಮಯದಲ್ಲಿ ತಮ್ಮ ದ್ವಿಚಕ್ರ ವಾಹನ ಪಂಕ್ಚರ್ ಅದ ಕಾರಣ ದಾಸರಹಳ್ಳಿಯಲ್ಲಿ ಹೋಗುತ್ತಿದ್ದಾಗ ದತ್ತಾತ್ರಯ ಆಶ್ರಮದ ಬಳಿ ಎರ್ ಬ್ಯಾಗ್ ಬಿದ್ದಿರುವುದನ್ನು ಕಂಡಿದ್ದಾರೆ. ಬ್ಯಾಗ್‍ನ್ನು ತೆಗೆದು ನೋಡಿದಾಗ ಬಟ್ಟೆಗಳು ಕಂಡು ಬಂದು ಬ್ಯಾಗನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ. ಇದನ್ನೂ ಓದಿ: ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಲಿಂಗಸುಗೂರಿನ ಶಿಕ್ಷಕ ಚಂದ್ರು ಆಯ್ಕೆ

ಅನುಮಾನಗೊಂಡು ಹಿಂದಿರುಗಿ ಪರಿಶೀಲಿಸಿದಾಗ ಬ್ಯಾಗ್‍ನಲ್ಲಿದ್ದ ಚಿನ್ನಾಭರಣ ಕಂಡು ಅದನ್ನು ತೆಗೆದುಕೊಂಡು ದಾಸರಹಳ್ಳಿಗೆ ಹೋಗಿದ್ದಾರೆ. ದಾಸರಹಳ್ಳಿಯಿಂದ ಹಿಂದಿರುಗಿದಾಗ ಮಳೆ ಇದ್ದ ಕಾರಣ ನಿಧಾನವಾಗಿ ಬಂದಿದ್ದಾರೆ. ಆದರೆ ಬ್ಯಾಗು ಅಲ್ಲಿರಲಿಲ್ಲ ನಂತರ ಚಿನ್ನಾಭರಣಗಳನ್ನು ಸುರಕ್ಷಿತವಾಗಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಒಡವೆಯಿದ್ದ ಪ್ಯಾಕನ್ನು ಮಧುಗಿರಿ ಸಿಪಿಐ ಎಂ. ಎಸ್. ಸರ್ದಾರ್ ಅವರಿಗೆ ಗ್ರಾಮ ಪಂಚಾಯಿತಿ ಸದಸ್ಯ ಶಿವಾನಂದ ನೀಡಿದ್ದಾರೆ. ಆದರೆ ಚಿನ್ನಾಭರಣದ ವಾರಸುದಾರರು ಯಾರೆಂದು ಪತ್ತೆಯಾಗಿಲ್ಲ.

Share This Article
Leave a Comment

Leave a Reply

Your email address will not be published. Required fields are marked *