ಅಸೂಯೆ, ಕೀಳರಿಮೆಯಿಂದ ಎಂಜಿನಿಯರ್ ಹೆಂಡ್ತಿಯನ್ನೇ ಕೊಂದೇ ಬಿಟ್ಟ!

Public TV
1 Min Read

ನೋಯ್ಡಾ: ಪತಿ ಅಸೂಯೆಯಿಂದ 24 ವರ್ಷದ ಎಂಜಿನಿಯರಿಂಗ್ ಹೆಂಡತಿಯನ್ನು ಕೊಂದಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

ರಿಚ ಸಿಸೋಡಿಯಾ (24) ಕೊಲೆಯಾದ ದುರ್ದೈವಿ. ಈ ಘಟನೆ ಬುಧವಾರ ಸಂಜೆ ನಡೆದಿದ್ದು, ರಿಚ ಆರೋಪಿ ಕುಲ್‍ದೀಪ್ ರಾಘವ್‍ನಿಂದ ಹಲ್ಲೆಗೊಳಗಾಗಿ ತೀವ್ರವಾಗಿ ಗಾಯಗೊಂಡಿದ್ದು, ನಗರದ ಕೈಲಾಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಉತ್ತರ ಪ್ರದೇಶ ಮೂಲದ ರಿಚ ಎರಡು ವರ್ಷದ ಹಿಂದೆ ಕುಲ್‍ದೀಪ್ ರಾಘವ್ ನನ್ನು ಮದುವೆಯಾಗಿದ್ದರು. ರಿಚ ಎಂಜಿನಿಯರಿಂಗ್ ಮಾಡಿದ್ದು, ನೋಯ್ಡಾದಲ್ಲಿ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ರಾಘವ್ 2011 ರಲ್ಲಿ ಬಿ.ಟೆಕ್ ಪದವಿಯನ್ನು ಮುಗಿಸಿದ್ದರು. ಆದರೂ ಯಾವುದೇ ಕೆಲಸ ಇರದೆ ಕೊನೆಗೆ ತನ್ನ ತಂದೆಯ ದಿನಸಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು.

ಇವರಿಬ್ಬರ ಮಧ್ಯೆ ಕೆಲಸದ ವಿಚಾರವಾಗಿ ಆಗಾಗ ಜಗಳ, ವಾದ ನಡೆಯುತ್ತಿತ್ತು. ಬುಧವಾರ ಕೂಡ ಇದೇ ವಿಚಾರಕ್ಕೆ ಜಗಳ ಮಾಡಿದ್ದು, ಜಗಳ ವಿಕೋಪಕ್ಕೆ ತಿರುಗಿ ರಾಘವ್ ತನ್ನ ತಾಳ್ಮೆಯನ್ನು ಕಳೆದುಕೊಂಡು ಹರಿತವಾದ ಚಾಕುವಿನಿಂದ ರಿಚ ಮೇಲೆ ಹಲ್ಲೆ ಮಾಡಿದ್ದಾನೆ.

ಹಲ್ಲೆಗೊಳಾಗದ ರಿಚಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ತೀವ್ರವಾಗಿ ಗಾಯಗೊಂಡಿದ್ದರಿಂದ ರಿಚಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ರಿಚಾ ದೇಹದಲ್ಲಿ ಅನೇಕ ಗಾಯಗಳಾಗಿದ್ದು, ಮೂವರು ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ರಿಚಾ ಕುಟುಂಬದವರು ಆರೋಪಿಸುತ್ತಿದ್ದಾರೆ.

ಆರೋಪಿ ಪತ್ನಿಯನ್ನು ಕೊಲೆ ಮಾಡಿ ತಲೆ ಮರಿಸಿಕೊಂಡಿದ್ದನು. ನಂತರ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ರಾಘವ್ ರಿಚ ನನ್ನ ಕೆಲಸದ ಬಗ್ಗೆ ಅಸೂಯೆ ಹಾಗೂ ಕೀಳರಿಮೆಯನ್ನು ಹೊಂದಿದ್ದಳು ಎಂದು ಆರೋಪಿಸಿದ್ದಾನೆ.

ಈ ಪ್ರಕರಣ ಸಂಬಂಧ ಪೊಲೀಸರು ಕುಲ್‍ದೀಪ್ ತಂದೆಯನ್ನು ವಶಪಡಿಸಿಕೊಂಡು ವಿಚಾರಣೆ ಮಾಡುತ್ತಿದ್ದು, ದಂಪತಿ ಇಬ್ಬರು ಕೀಳರಿಮೆಯ ಭಾವನೆ ಹೊಂದಿದ್ದರು. ಆದ್ದರಿಂದ ಈ ಫಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *