ಈಗಲ್‍ಟನ್ ರೆಸಾರ್ಟ್ ನಲ್ಲಿ ಡಿಕೆ ಸುರೇಶ್ ಭೇಟಿಯಾದ ಜೆಡಿಎಸ್ ಬಂಡಾಯ ಶಾಸಕರು

Public TV
1 Min Read

ರಾಮನಗರ: ಜೆಡಿಎಸ್‍ನಿಂದ ಅಮಾನಾತಾದ ಶಾಸಕರು ಕಾಂಗ್ರೆಸ್ ಸೇರೋದು ಬಹುತೇಕ ಕನ್ಫರ್ಮ್ ಆದಂತಿದೆ.

ಶುಕ್ರವಾರ ಐಟಿ ದಾಳಿ ನಡೆದಿರುವ ಹೊತ್ತಲ್ಲೇ ಡಿಕೆಶಿ ಮನೆ ಒಳಗೆ ತೆರಳಲು ಏಳು ಮಂದಿ ಬಂಡಾಯ ಶಾಸಕರು ಪ್ರಯತ್ನಿಸಿದ್ರು. ಆದ್ರೆ ಇದಕ್ಕೆ ಐಟಿ ಅಧಿಕಾರಿಗಳು ಅವಕಾಶ ಕೊಡಲಿಲ್ಲ. ಹೀಗಾಗಿ ಅವರು ಗುಜರಾತ್ ಶಾಸಕರು ಉಳಿದುಕೊಂಡಿರುವ ಈಗಲ್ ಟನ್ ರೆಸಾರ್ಟ್‍ಗೆ ಭೇಟಿ ನೀಡಿದ್ರು. ಅಲ್ಲಿಯೇ ಬೀಡುಬಿಟ್ಟಿದ್ದ ಸಂಸದ ಡಿಕೆ ಸುರೇಶ್ ಅವರನ್ನ ಭೇಟಿ ಮಾಡಿ ಧೈರ್ಯ ತುಂಬಿದ್ರು. ಅಲ್ಲದೇ ಗುಜರಾತ್ ಶಾಸಕರಲ್ಲಿ ಮನೋಸ್ಥೈರ್ಯ ತುಂಬೋ ಕೆಲಸ ಮಾಡಿದ್ರು.

ಬಳಿಕ ಮಾತಾಡಿದ ಜಮೀರ್ ಅಹ್ಮದ್, ನಮ್ಮನ್ನು ಯಾರೂ ಆಪರೇಷನ್ ಮಾಡಿಲ್ಲ ಅಂದ್ರು. ಮೋದಿ ಹಿಟ್ಲರ್‍ನಂತೆ ವರ್ತೀಸ್ತಿದ್ದಾರೆ. ಎಷ್ಟು ದಿನ ನಡೆಯುತ್ತೋ ನೋಡೋಣ ಅಂದ್ರು.

ಇದೇ ವೇಳೆ ಶಾಸಕ ಚೆಲುವರಾಯಸ್ವಾಮಿ ಮಾತನಾಡಿ, ಇಲ್ಲಿ ಎಲ್ಲಾ ಕೈ ಶಾಸಕರು ಆರಾಮಾಗಿ ಇದ್ದಾರೆ. ಅಹ್ಮದ್ ಪಟೇಲ್ ಗೆಲುವು ಖಚಿತ ಅಂತ ಹೇಳಿದ್ರು.

 

Share This Article
Leave a Comment

Leave a Reply

Your email address will not be published. Required fields are marked *