ಜೆಡಿಎಸ್ ರ‍್ಯಾಲಿಗೆ ಬಂದ ನೂರಾರು ಬೈಕ್ ಸವಾರರಿಗೆ 500 ರೂ. ಪೆಟ್ರೋಲ್ ಭಾಗ್ಯ!

Public TV
1 Min Read

ನೆಲಮಂಗಲ: ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬೀಳುವ ಹಿನ್ನೆಲೆಯಲ್ಲಿ ಕೊನೆಯ ಪ್ರಚಾರದ ಕಸರತ್ತಾಗಿ ಜೆಡಿಎಸ್ ಪಕ್ಷ ಬೈಕ್ ರ‍್ಯಾಲಿ ಆಯೋಜಿಸಿದೆ.

ಬೈಕ್ ನಲ್ಲಿ ಬಂದ ನೂರಾರು ಕಾರ್ಯಕರ್ತರಿಗೆ ಭರ್ಜರಿ ಪೆಟ್ರೋಲ್ ಭಾಗ್ಯ ನೀಡಿದೆ. ಬೆಂಗಳೂರು ಹೊರವಲಯದ ನೆಲಮಂಗಲ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಕೆ.ಶ್ರೀನಿವಾಸಮೂರ್ತಿ ಪ್ರತಿಯೊಬ್ಬರಿಗೂ 500 ರೂ. ಟೋಕನ್ ನೀಡಿ ಕಾರ್ಯಕರ್ತರನ್ನು ಚುನಾವಣಾ ಪ್ರಚಾರಕ್ಕೆ ಮುಂದಾಗುವಂತೆ ತಿಳಿಸಿ ಪಕ್ಷವನ್ನು ಮುಜುಗರಕ್ಕೆ ಒಳಗಾಗುವಂತೆ ಮಾಡಿದ್ದಾರೆ.

ನೆಲಮಂಗಲದ ಅರಿಶಿನಕುಂಟೆ ಬಳಿ ಇರುವ ಹೆಚ್.ಪಿ. ಪೆಟ್ರೋಲ್ ಬಂಕ್ ನಲ್ಲಿ ಸರದಿ ಸಾಲಿನಲ್ಲಿ ನಿಂತ ಬೈಕ್ ಸವಾರರು ನಾ ಮುಂದು ತಾ ಮುಂದು ಎಂಬಂತೆ ಬೈಕ್ ಗಳಿಗೆ ಪೆಟ್ರೋಲ್ ತುಂಬಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *