ಬೆಂಗಳೂರು: ಜೆಡಿಎಸ್ ಪಕ್ಷದ ಸಂಘಟನೆ ಹಾಗೂ ಬಲವರ್ಧನೆಗಾಗಿ ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಅವರ ಅಧ್ಯಕ್ಷತೆಯಲ್ಲಿ ನೂತನ ಕೋರ್ ಕಮಿಟಿ ರಚನೆ ಮಾಡಲಾಗಿದ್ದು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದರು.
ಪಕ್ಷದ ಕಚೇರಿಯಲ್ಲಿಂದು ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದ ನಂತರ ಅವರು ಮಾಧ್ಯಮಗೋಷ್ಠಿಯಲ್ಲಿ 20 ಸದಸ್ಯರ ಪಟ್ಟಿಯನ್ನು ಬಿಡುಗಡೆ ಮಾಡಿದರು. ಕೋರ್ ಕಮಿಟಿ ವಿವರ ಹೀಗಿದೆ.
1. ಬಂಡೆಪ್ಪ ಕಾಶೆಂಪೂರ್– ಅಧ್ಯಕ್ಷರು 2. ವೆಂಕಟರಾವ್ ನಾಡಗೌಡ-ಸದಸ್ಯರು 3. ಸಿ.ಎಸ್.ಪುಟ್ಟರಾಜು– ಸದಸ್ಯರು 4. ಪ್ರಜ್ವಲ್ ರೇವಣ್ಣ-ಸದಸ್ಯರು 5. ಕುಪೇಂದ್ರ ರೆಡ್ಡಿ-ಸದಸ್ಯರು 6. ಮೊಹಮ್ಮದ್ ಝಫ್ರುಲ್ಲಾಖಾನ್-ಸದಸ್ಯರು 7. ಎಂ.ಕೃಷ್ಣಾರೆಡ್ಡಿ-ಸದಸ್ಯರು 8 .ರಾಜಾ ವೆಂಕಟಪ್ಪನಾಯಕ-ಸದಸ್ಯರು 9. ಬಿ.ಎಂ.ಫಾರೂಕ್-ಸದಸ್ಯರು 10. ಕೆ.ಎ.ತಿಪ್ಪೇಸ್ವಾಮಿ-ಸದಸ್ಯರು & ಸಂಚಾಲಕರು ಇದನ್ನೂ ಓದಿ: ಡಿಕೆಶಿ, ಸಿದ್ದರಾಮಯ್ಯ ಅವರಿಗೆ ಕೆಲಸ ಇಲ್ಲ: ನಾರಾಯಣಗೌಡ
11. ವೈಎಸ್. ವಿ ದತ್ತ –ಸದಸ್ಯರು 12. ಕೆ.ಎಂ.ತಿಮ್ಮರಾಯಪ್ಪ-ಸದಸ್ಯರು 13. ಟಿ.ಎ.ಶರವಣ-ಸದಸ್ಯರು 14. ಶಾರದಾ ಪೂರ್ಯನಾಯಕ್-ಸದಸ್ಯರು 15. ನಾಸೀರ್ ಭಗವಾನ್-ಸದಸ್ಯರು 16. ಹನುಮಂತಪ್ಪ ಬಸಪ್ಪ ಮಾವಿನಮರದ-ಸದಸ್ಯರು 17. ರೂತ್ ಮನೋರಮಾ-ಸದಸ್ಯರು 18. ಸುಧಾಕರ್ ಎಸ್. ಶೆಟ್ಟಿ-ಸದಸ್ಯರು 19. ವಿ.ನಾರಾಯಣಸ್ವಾಮಿ-ಸದಸ್ಯರು 20. ಸಮೃದ್ಧಿ ಮಂಜುನಾಥ್-ಸದಸ್ಯರು
ವಿಶೇಷ ಆಹ್ವಾನಿತರು: ಹೆಚ್.ಡಿ.ದೇವೇಗೌಡರು, ಮಾಜಿ ಪ್ರಧಾನಮಂತ್ರಿಗಳು ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರು ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರು ಹೆಚ್.ಕೆ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷರು ಇದನ್ನೂ ಓದಿ: ಋತುಸ್ರಾವದ ರಕ್ತ ಸೇವಿಸುತ್ತೇನೆ, ಫೇಸ್ ಮಾಸ್ಕ್ ಆಗಿ ಬಳಸುತ್ತೇನೆ
ಮಾಜಿ ಸಚಿವ ಎನ್.ಎಂ.ನಬಿ ಅವರನ್ನು ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಹಾಗೆಯೇ ಶಾಸಕ ರಾಜಾ ವೆಂಕಟಪ್ಪ ನಾಯಕ ದೊರೆ ಅವರನ್ನು ಜೆಡಿಎಸ್ ಪರಿಶಿಷ್ಠ ಪಂಗಡ ರಾಜ್ಯಾಧ್ಯಕ್ಷರನ್ನಾಗಿ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಅವರು ನೇಮಕ ಮಾಡಿದ್ದಾರೆ.