ರಾಮನಗರ: ತಮ್ಮದೇ ಪಕ್ಷದ ಕಾರ್ಯಕರ್ತ, ಅರಣ್ಯ ಇಲಾಖೆ ಗುತ್ತಿಗೆ ನೌಕರರೊಬ್ಬರು ಇಂದು ಶಾಸಕಿ ಅನಿತಾ ಕುಮಾರಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಿಮ್ಮ ಮಾವನವರಿಗೆ ಹಗಲು ರಾತ್ರಿ ಎನ್ನದೇ ಕ್ಯಾನ್ವಾಸ್ ಮಾಡಿದ್ದೇವೆ. ಆ ಋಣಕ್ಕಾದ್ರೂ ನಮ್ಮ ಕೆಲಸ ಮಾಡಿಕೊಡಿ. ನಿಮ್ಮ ಯಜಮಾನ್ರು ಸಿಎಂ, ನೀವು ನಮ್ಮ ಕ್ಷೇತ್ರದ ಶಾಸಕಿಯಾಗಿದ್ದೀರಿ. ನಿಮ್ಮನ್ನ ಕೇಳದೇ ಇನ್ಯಾರನ್ನ ಕೇಳೋಣಾ ಎಂದು ಹೇಳಿದ್ದಾರೆ. ಈ ವೇಳೆ ಶಾಸಕಿ ಅವರನ್ನೇ ಕೇಳ್ಬಿಟ್ರೆ ಆಯ್ತದಲ್ಲ. ನಾನು ಕೇಳಿದ್ರೆ ಅವರು, ನಾನು ಬರೀ ರಾಮನಗರಕ್ಕೆ ಮಾತ್ರ ಮುಖ್ಯಮಂತ್ರಿ ಅಲ್ಲ, ರಾಜ್ಯಕ್ಕೆ ಸಿಎಂ ಎಂದು ಹೇಳುತ್ತಾರೆ. ಹೀಗಾಗಿ ಅಪಾಯಿಂಟಮೆಂಟ್ ಕೊಡಿಸ್ತೀನಿ ಅವರನ್ನೇ ಕೇಳಿ ಅಂದಿದ್ದಾರೆ.
ಕ್ಲಾಸ್ ಯಾಕೆ..?:
1,800 ಜನ ಡಿ ಗ್ರೂಪ್ ಗುತ್ತಿಗೆ ನೌಕರರನ್ನು ಪರ್ಮನೆಂಟ್ ಮಾಡಿದ್ದಾರೆ. ನಾವಿರುವುದು 600 ಜನ. ಯಾಕೆ ನಮ್ಮನ್ನ ಪರ್ಮನೆಂಟ್ ಮಾಡೋಕೆ ಆಗಲ್ಲ. ಅವರು ಕೇಳಿದ್ರೂ ಎಂದು ಪರ್ಮನೆಂಟ್ ಮಾಡಿದ್ದೀರಿ. ನಿಮಗೆ ನಮ್ಮನ್ನ ಯಾಕೆ ಪರ್ಮನೆಂಟ್ ಮಾಡೋಕೆ ಆಗಲ್ಲ. ನಿಮ್ಮ ಯಜಮಾನರು, ಮಾವ ಅಲ್ಲದೇ ನಿಮಗೋಸ್ಕರ ಚುನಾವಣೆಗಾಗಿ ಹಗಲು-ರಾತ್ರಿ ಎನ್ನದೆ ದುಡಿದಿದ್ದೇವೆ. ಆ ಋಣಕ್ಕಾಗದ್ರೂ ನಮ್ಮ ಕೆಲಸ ಮಾಡಿಕೊಡಿ ಮೇಡಂ ಎಂದು ಕಾರ್ಯಕರ್ತ ಶಾಸಕಿ ಹಿಂದೆ ದುಂಬಾಲು ಬಿದ್ದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv