ಬಂಟ್ವಾಳದಲ್ಲಿ ರಾಹುಲ್ ಗಾಂಧಿ, ಸಿಎಂಗಿಂತ ಪೂಜಾರಿಗೆ ಹೆಚ್ಚು ಜೈಕಾರ!

Public TV
1 Min Read

ಮಂಗಳೂರು: ರಾಹುಲ್ ಗಾಂಧಿ ಕಳೆದ ಎರಡು ದಿನದಿಂದ ಕರಾವಳಿ ಪ್ರವಾಸದಲ್ಲಿದ್ದಾರೆ. ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಬೃಹತ್ ಸಮಾವೇಶ ಮಾಡಿದ್ದಾರೆ. ಆದರೆ ಸಮಾವೇಶದಲ್ಲಿ ಶೈನ್ ಆಗಿದ್ದು ಸಿಎಂ ಅಲ್ಲ, ರಾಗಾ ಅಲ್ಲ ಬದಲಾಗಿ ಜನಾರ್ದನ ಪೂಜಾರಿ.

ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅವರ ಮನೆಯ ವಠಾರದಲ್ಲೇ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಅನಾರೋಗ್ಯದಿಂದಾಗ ಪೂಜಾರಿ ಸಮಾವೇಶಕ್ಕೆ ಬರ್ತಾರೋ ಇಲ್ವೋ ಎಂಬ ಸಂಶಯ ಇತ್ತು. ಆದರೆ ರಾಹುಲ್ ಭಾಷಣ ಮುಗಿಯುತ್ತಿದ್ದಂತೆ, ಅನಾರೋಗ್ಯದ ಹೊರತಾಗಿಯೂ ಪೂಜಾರಿ ನಿಧಾನವಾಗಿ ನಡೆದು ಬಂದು ವೇದಿಕೆ ಹತ್ತಿದರು.

ಈ ವೇಳೆ ಕೇಳಿ ಬಂದ ಜಯಘೋಷಕ್ಕೆ ಸಿಎಂ ಸಿದ್ದರಾಮಯ್ಯ ಕೆಲಕಾಲ ಭಾಷಣ ಸ್ಥಗಿತಗೊಳಿಸಬೇಕಾಯ್ತು. ಸಿಎಂ , ರಾಹುಲ್ ಗಾಂಧಿ ಗಿಂತ ಜಾಸ್ತಿ ಜನಾರ್ದನ ಪೂಜಾರಿಗೆ ಬಂಟ್ವಾಳದಲ್ಲಿ ಜೈಕಾರ ಬಿದ್ದಿದೆ. ಪೂಜಾರಿಗೆ ವ್ಯಕ್ತವಾದ ಜನಬೆಂಬಲಕ್ಕೆ ಕೆಲಕಾಲ ಸಿಎಂ ಕೂಡಾ ಕಕ್ಕಾಬಿಕ್ಕಿಯಾದರು.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ರಾಹುಲ್ ಪ್ರವಾಸ ನಮಾಜ್ ವಿಚಾರಕ್ಕೂ ಗಮನ ಸೆಳೆಯಿತು. ಅತೀ ಹೆಚ್ಚು ಮುಸ್ಲಿಂ ಮತದಾರರನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಶುಕ್ರವಾರದ ದಿನ ಸಮಾವೇಶ ಹಮ್ಮಿಕೊಂಡ ಕಾರಣ ಕಾಂಗ್ರೇಸ್ ಪಕ್ಷ ತರಾತುರಿಯ ಕಾರ್ಯಕ್ರಮ ನಡೆಸಿತು.

ಸರಿಯಾದ ಸಮಯಕ್ಕ ಆರಂಭವಾದ ಸಮಾವೇಶದಲ್ಲಿ ವೇದಿಕೆ ಏರುತ್ತಿದ್ದಂತೆ ರಾಹುಲ್ ಗಾಂಧಿ ಭಾಷಣ ಆರಂಭಿಸಿದರು. ಈ ಮೂಲಕ ಮಧ್ಯಾಹ್ನದ ನಮಾಝ್ ಗೂ ಮುನ್ನ ಸಮಾವೇಶ ಮುಗಿಸಲು ಪ್ರಯತ್ನಿಸಲಾಯ್ತು. ಸಿಎಂ ಸಿದ್ದರಾಮಯ್ಯ ಕೂಡಾ ತಮ್ಮ ಭಾಷಣಕ್ಕೂ ಮುನ್ನ, ನಮಾಜ್ ಗೆ ಅಡ್ಡಿಯಾಗದಂತೆ ಶೀಘ್ರ ಭಾಷಣೆ ಮುಗಿಸುವ ಭರವಸೆ ನೀಡಿ ಭಾಷಣ ಮುಗಿಸಿದರು.

Share This Article
Leave a Comment

Leave a Reply

Your email address will not be published. Required fields are marked *