ಮದರಸಾ ತೆರವು ಮಾಡದೆ ಇದ್ದರೆ ನಾವೇ ಅವರ ಕೊರಳಪಟ್ಟಿ ಹಿಡಿದು ಹೊರ ಹಾಕ್ತಿವಿ: ಹಿಂದೂ ಸಂಘಟನೆಗಳು

Public TV
0 Min Read

ಮಂಡ್ಯ: ಜಾಮೀಯಾ ಮಸೀದಿ ವಿವಾದದಲ್ಲಿ ಸ್ಪಷ್ಟೀಕರಣ ಬಾರದೇ ಇದ್ದರೆ ಪ್ರತಿಭಟನೆ ಉಗ್ರ ರೂಪ ಪಡೆಯುತ್ತೆ ಎಂದು ಜಿಲ್ಲಾಡಳಿತಕ್ಕೆ 25 ದಿನಗಳ ಗಡುವು ನೀಡಿ, ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಸಂರಕ್ಷಿತಾ ಪ್ರದೇಶದಲ್ಲಿನ ಮದರಸಾ ಇನ್ನೂ 25 ದಿನದಲ್ಲಿ ತೆರವಾಗದೇ ಇದ್ದರೆ ನಾವೇ ಅವರ ಕೊರಳಪಟ್ಟಿ ಹಿಡಿದು ಹೊರ ಹಾಕುತ್ತೇವೆ. ಇದು ಹಿಂದೂ ಪರ ಸಂಘಟನೆಗಳ ಎಚ್ಚರಿಕೆಯ ಮಾತು.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಹಿಂದೂ ಪರ ಸಂಘಟನೆಗಳ ಮುಖಂಡರು, ಇವತ್ತಿನ ಪೊಲೀಸ್ ಬ್ಯಾರಿಕೇಡ್‍ಗೆ ನಾವು ಹೆದರಿಲ್ಲ. ನಮ್ಮ ಬೇಡಿಕೆ ಈಡೇರದಿದ್ದರೆ 25 ದಿನದ ನಂತರದ ಹೋರಾಟದಲ್ಲಿ ನಮ್ಮ ಕಿಚ್ಚು ತೋರಿಸುತ್ತೇವೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *