– ಮೊಮ್ಮಗನ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರೋ ಬಂಡು ಆಂಡೇಕರ್
ಮುಂಬೈ: ಮೊಮ್ಮಗನ ಕೊಲೆ ಆರೋಪದಲ್ಲಿ ಜೈಲಲ್ಲಿರುವ ಗ್ಯಾಂಗ್ಸ್ಟರ್ (Gangster) ಬಂಡು ಆಂಡೇಕರ್, ಸ್ಥಳೀಯ ಸಂಸ್ಥೆ ಚುನಾವಣೆಗೆ (Pune Civic Polls) ನಾಮಪತ್ರ ಸಲ್ಲಿಸಿದ್ದಾನೆ.
ಕಪ್ಪು ಬಟ್ಟೆಯಿಂದ ಮುಖ ಮುಚ್ಚಿ, ಕೈಗಳನ್ನು ಕಟ್ಟಿ ಸರ್ಕಾರಿ ಕಚೇರಿಗೆ ಗ್ಯಾಂಗ್ಸ್ಟರ್ನನ್ನು ಕರೆದೊಯ್ಯಲಾಯಿತು. ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಪೊಲೀಸ್ ಭದ್ರತೆಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾನೆ. ಇದನ್ನೂ ಓದಿ: ಮರಾಠಿ ಮಾತನಾಡದಿದ್ದಕ್ಕೆ 6 ವರ್ಷದ ಮಗಳನ್ನೇ ಕೊಂದ ತಾಯಿ!
ಮೊಮ್ಮಗ ಆಯುಷ್ ಕೊಮ್ಕರ್ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆಂಡೇಕರ್ಗೆ ಪುಣೆಯ ವಿಶೇಷ MCOCA ನ್ಯಾಯಾಲಯವು ಷರತ್ತುಬದ್ಧ ಅನುಮತಿ ನೀಡಿತ್ತು. ಅಪರಾಧಿಯು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾನೆ. ಅದೇ ಪ್ರಕರಣದಲ್ಲಿ ಆರೋಪಿಗಳಾಗಿರುವ ಬಂಡು ಅತ್ತಿಗೆ ಲಕ್ಷ್ಮಿ ಆಂಡೇಕರ್ ಮತ್ತು ಸೊಸೆ ಸೋನಾಲಿ ಆಂಡೇಕರ್ ಕೂಡ ನ್ಯಾಯಾಲಯದ ಅನುಮತಿಯಂತೆ ನಾಮಪತ್ರ ಸಲ್ಲಿಸಿದ್ದಾರೆ.
ಪುಣೆಯಲ್ಲಿ ಮಹಾನಗರ ಪಾಲಿಕೆಗಳು ಮತ್ತು ರಾಜ್ಯದ 28 ಇತರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಜನವರಿ 15 ರಂದು ನಡೆಯಲಿವೆ. ಕಪ್ಪು ಬಟ್ಟೆಯಿಂದ ಮುಖ ಮುಚ್ಚಿ, ಕೈಗಳನ್ನು ಹಗ್ಗದಿಂದ ಕಟ್ಟಿ, ಯೆರವಡಾ ಕೇಂದ್ರ ಕಾರಾಗೃಹದಿಂದ ಪೊಲೀಸ್ ವ್ಯಾನ್ನಲ್ಲಿ ನಗರದ ಭವಾನಿ ಪೇಟ್ ಪ್ರದೇಶದಲ್ಲಿರುವ ಗೊತ್ತುಪಡಿಸಿದ ನಾಮಪತ್ರ ಸಲ್ಲಿಕೆ ಕೇಂದ್ರಕ್ಕೆ ಆಂಡೇಕರ್ನನ್ನು ಕರೆತರಲಾಯಿತು.
ಅಪರಾಧಿಯ ವಕೀಲ ಮಿಥುನ್ ಚವಾಣ್, ಆಂಡೇಕರ್ ಮತ್ತು ಅವರ ಸಂಬಂಧಿಕರು ಪುಣೆ ಮುನ್ಸಿಪಲ್ ಕಾರ್ಪೊರೇಷನ್ (ಪಿಎಂಸಿ)ನ ಭವಾನಿ ಪೇತ್ ವಾರ್ಡ್ನಲ್ಲಿ ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತಿರುಪತಿ | ಅಮಾನತಾಗಿದ್ದ ಪ್ರೊಫೆಸರ್ ಶವ ಕಾರಲ್ಲಿ ಪತ್ತೆ
ಸೆ.5 ರಂದು ನಾನಾ ಪೇಟ್ನಲ್ಲಿ ಆಯುಷ್ನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈತ ಗಣೇಶ್ ಕೋಮ್ಕರ್ ಪುತ್ರನಾಗಿದ್ದು, ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮಾಜಿ ಕಾರ್ಪೊರೇಟರ್ ಮತ್ತು ಬಂಡು ಆಂಡೇಕರ್ ಅವರ ಪುತ್ರ ವನರಾಜ್ ಅಂಡೆಕರ್ ಕೊಲೆ ಪ್ರಕರಣದ ಆರೋಪಿಯಾಗಿದ್ದ.
ನಾನಾ ಪೇಠ್ ನಿವಾಸಿಗಳಾದ ಬಂಡು ಅಲಿಯಾಸ್ ಸೂರ್ಯಕಾಂತ್ ರಾಣೋಜಿ ಅಂದೇಕರ್ (70), ಲಕ್ಷ್ಮಿ ಉದಯಕಾಂತ್ ಅಂದೇಕರ್ (60), ಸೋನಾಲಿ ವನರಾಜ್ ಅಂದೇಕರ್ (36) ಮತ್ತು ಇತರ 15 ಜನರು ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿದ್ದಾರೆ.

