ನಿಮ್ಮ ಕೊನೆಯ ಆಸೆ ಏನು? ನಿರ್ಭಯಾ ದೋಷಿಗಳ ಗಲ್ಲು ಶಿಕ್ಷೆಗೆ ಶುರುವಾಯ್ತು ದಿನಗಣನೆ

Public TV
1 Min Read

ನವದೆಹಲಿ : ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ದೋಷಿಗಳ ಗಲ್ಲು ಶಿಕ್ಷೆಗೆ ದಿನಗಣನೆ ಶುರುವಾಗಿದೆ. ಫೆಬ್ರವರಿ 1 ರಂದು ಬೆಳಗ್ಗೆ ಆರು ಗಂಟೆಗೆ ಗಲ್ಲು ಶಿಕ್ಷೆ ವಿಧಿಸಲಿದ್ದು ಈ ನಿಟ್ಟಿನಲ್ಲಿ ಸಿದ್ಧತೆಗಳು ಆರಂಭವಾಗಿದೆ.

ನಾಲ್ವರು ದೋಷಿಗಳಿಗೆ ತಮ್ಮ ಕೊನೆಯ ಆಸೆ ತಿಳಿಸುವಂತೆ ತಿಹಾರ್ ಜೈಲು ಅಧಿಕಾರಿಗಳು ಲಿಖಿತ ರೂಪದಲ್ಲಿ ಪತ್ರವೊಂದನ್ನ ನೀಡಿದ್ದಾರೆ. ಕಳೆದ ವಾರ ಈ ಮಾಹಿತಿ ಕೇಳಿರುವ ಹೆಚ್ಚುವರಿ ಇನ್ಸ್‍ಪೆಕ್ಟರ್ ಜನರಲ್ ರಾಜ್‍ಕುಮಾರ್, ಈಡೇರಿಸಬಹುದಾದ ಆಸೆಗಳನ್ನು ಪಟ್ಟಿ ಮಾಡುವಂತೆ ಸೂಚಿಸಿದ್ದಾರೆ.

ಈ ಮಾಹಿತಿ ಧೃಡಪಡಿಸಿರುವ ಎಐಜಿ ರಾಜಕುಮಾರ್, ಗಲ್ಲಿಗೇರಿಸುವ ಮೊದಲು ನಾಲ್ಕು ಜನರನ್ನು ತಮ್ಮ ಕೊನೆಯ ಆಶಯವನ್ನು ಪಟ್ಟಿ ಮಾಡಲು ಲಿಖಿತವಾಗಿ ಕೇಳಿಕೊಂಡಿದೆ. ಅವರಲ್ಲಿ ಯಾರೂ ಇಲ್ಲಿಯವರೆಗೆ ಪ್ರತಿಕ್ರಿಯಿಸಿಲ್ಲ ಅವರ ಉತ್ತರಕ್ಕಾಗಿ ಕಾಯುತ್ತಿದ್ದೇವೆ, ನಾಲ್ವರು ದೋಷಿಗಳ ಕೊನೆಯ ಆಸೆ ಏನೆಂದು ಒಮ್ಮೆ ನಮಗೆ ತಿಳಿಸಿದರೆ, ಆಸೆ ಈಡೇರಲು ಸಾಧ್ಯವಾದರೆ ತಿಹಾರ್ ಅಧಿಕಾರಿಗಳು ನಿರ್ಧಾರ ತೆಗೆದುಕೊಳ್ಳುತ್ತಾರೆ. ಪ್ರತಿ ಆಸೆ ಪೂರ್ಣಗೊಳ್ಳಲು ಸಾಧ್ಯವಿಲ್ಲ. ಅವರು ಲಿಖಿತವಾಗಿ ನಮಗೆ ಪಟ್ಟಿ ನೀಡಿದಲ್ಲಿ ಜೈಲು ಆಡಳಿತವು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.

ನಾಲ್ಕು ಅಪರಾಧಿಗಳು ತಾವು ಕೊನೆಯ ಬಾರಿಗೆ ಯಾರನ್ನಾದರೂ ಭೇಟಿಯಾಗಲು ಬಯಸಿದರೆ ಅವರು ಹೆಸರಗಳು ಮತ್ತು ಅಪರಾಧಿಗಳು ಹೊಂದಿರುವ ಯಾವುದೇ ಆಸ್ತಿ ಅಥವಾ ವಸ್ತುಗಳನ್ನು ಅವರು ಬಯಸುವ ಯಾರಿಗಾದರೂ ವರ್ಗಾಯಿಸಲು ಕೇಳಿಕೊಳ್ಳಲಾಗಿದೆ ಎಂದು ಜೈಲು ಅಧಿಕಾರಿಗಳು ಹೇಳಿದರು.

ಫೆಬ್ರವರಿ 1 ರಂದು ಬೆಳಗ್ಗೆ 6 ಗಂಟೆಗೆ ವಿನಯ್ ಶರ್ಮಾ (26), ಅಕ್ಷಯ್ ಕುಮಾರ್ ಸಿಂಗ್ (31), ಮುಖೇಶ್ ಕುಮಾರ್ ಸಿಂಗ್ (32) ಮತ್ತು ಪವನ್ (26) ಅವರನ್ನು ಗಲ್ಲಿಗೇರಿಸಿಸಲು ದೆಹಲಿ ನ್ಯಾಯಾಲಯವು ಜನವರಿ 17 ರಂದು ಹೊಸ ಡೆತ್ ವಾರಂಟ್ ಹೊರಡಿಸಿದೆ.

Share This Article
Leave a Comment

Leave a Reply

Your email address will not be published. Required fields are marked *