ತಮ್ಮನ ಬಗ್ಗೆ ಹೆಮ್ಮೆಯ ಮಾತಾಡಿದರು ನವರಸ ನಾಯಕ!

Public TV
1 Min Read

ಬೆಂಗಳೂರು: ಪ್ರತಿಭಾವಂತ ನಟ ಕೋಮಲ್ ಎಲ್ಲಿ ಹೋದರು ಎಂಬ ಪ್ರಶ್ನೆಯೊಂದು ವರ್ಷಾಂತರಗಳಿಂದ ಅವರನ್ನು ಅಭಿಮಾನಿಸುವ, ಮೆಚ್ಚಿಕೊಳ್ಳುವವರನ್ನೆಲ್ಲ ಕಾಡುತ್ತಲೇ ಇದೆ. ಕೆಂಪೇಗೌಡ 2 ಚಿತ್ರದ ಮೂಲಕ ಭಿನ್ನ ಗೆಟಪ್ಪಿನಲ್ಲಿ ಕೋಮಲ್ ಮತ್ತೆ ಮರಳೋ ಸೂಚನೆ ನೀಡಿದಾಗ ಎಲ್ಲರೂ ಖುಷಿಗೊಂಡಿದ್ದರು. ಆದರೆ ಅದಾದ ನಂತರವೂ ಒಂದು ದೊಡ್ಡ ಗ್ಯಾಪಿನ ನಂತರ ಕೋಮಲ್ ಕೆಂಪೇಗೌಡನಾಗಿ ಅಬ್ಬರಿಸಿದ್ದಾರೆ. ಯೂಟ್ಯೂಬ್ ನಲ್ಲಿ ಈ ಸಿನಿಮಾ ಟ್ರೈಲರ್ ಈಗ ಮಿಲಿಯನ್ನುಗಟ್ಟಲೆ ವೀವ್ಸ್ ಪಡೆಯೋ ಮೂಲಕ ವಿರಾಟ್ ರೂಪ ಪ್ರದರ್ಶಿಸಿದೆ.

ಕೆಂಪೇಗೌಡ2 ಚಿತ್ರದ ಟ್ರೈಲರ್ ಗೆ ಈ ಪಾಟಿ ಜನಬೆಂಬಲ ಸಿಕ್ಕಿರೋದರಿಂದ ಕೋಮಲ್ ಕೂಡಾ ಖುಷಿಗೊಂಡಿದ್ದಾರೆ. ಹೊಸಾ ಗೆಟಪ್ಪಿನಲ್ಲಿ ಮರಳಿದಾಗ ಈ ಥರದ ಸ್ವಾಗತ ಸಿಕ್ಕರೆ ಯಾವ ನಟನಿಗೇ ಆದರೂ ಅದಕ್ಕಿಂತಲೂ ಖುಷಿಯ ಸಂಗತಿ ಬೇರೊಂದಿರಲು ಸಾಧ್ಯವಿಲ್ಲ. ಹೀಗೆ ತಮ್ಮನ ಚಿತ್ರ ಗೆಲ್ಲುವ ಸ್ಪಷ್ಟ ಸೂಚನೆ ಸಿಕ್ಕಿರುವಾಗ ಅಣ್ಣ ಜಗ್ಗೇಶ್ ಅವರಿಗೆ ಖುಷಿಯಾಗದಿರಲು ಸಾಧ್ಯವೇ?

ಆರಂಭದಿಂದ ಇಲ್ಲಿಯವರೆಗೂ ಸಹೋದರ ಕೋಮಲ್ ಅವರಿಗೆ ಬೆನ್ನೆಲುಬಾಗಿ ಸಾಥ್ ನೀಡುತ್ತಾ ಬಂದಿರುವವರು ಜಗ್ಗೇಶ್. ಅವರೀಗ ಕೆಂಪೇಗೌಡ 2 ಚಿತ್ರದ ಟ್ರೈಲರಿಗೆ ಸಿಕ್ಕಿರೋ ಅಭೂತಪೂರ್ವ ಬೆಂಬಲದಿಂದ ಥ್ರಿಲ್ ಆಗಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕವೇ ಇದಕ್ಕೆ ಕಾರಣರಾದ ಕನ್ನಡ ಕುಲಕೋಟಿಗೆ ಧನ್ಯವಾದ ಸಮರ್ಪಿಸಿದ್ದಾರೆ. `ಕೆಂಪೇಗೌಡ2 ಚಿತ್ರಕ್ಕೆ ಒಂದು ಮಿಲಿಯನ್ ವೀಕ್ಷಣೆ ಸಿಗುವಂತೆ ಮಾಡಿದ ಕನ್ನಡ ಕುಲಕೋಟಿಗೆ ಧನ್ಯವಾದಗಳು. ಇದೀಗ ಈ ಸಿನಿಮಾಗೆ ಡಿಐ ನಡೆಯುತ್ತಿದೆ. ಈ ರಾ ಸಿನಿಮಾ ನೋಡಿಯೇ ನನಗೆ ರೋಮಾಂಚನವಾಗಿದೆ. ಬೆಸ್ಟ್ ಕಮರ್ಶಿಯಲ್ ಮೂವಿಗಳ ಸಾಲಿಗೆ ಈ ಚಿತ್ರ ಸೇರಲಿದೆ ಎಂದು ಮನ ಹೇಳಿತು. ಅಣ್ಣನಾಗಿ ಹೆಮ್ಮೆಯಾಯಿತು’ ಅಂತ ಜಗ್ಗೇಶ್ ಬರೆದುಕೊಂಡಿದ್ದಾರೆ.

ಶಂಕರ್ ಗೌಡ ನಿರ್ದೇಶನದ ಈ ಚಿತ್ರದಲ್ಲಿ ಕೋಮಲ್ ಈವರೆಗಿನ ಇಮೇಜನ್ನೇ ಬದಲಾಯಿಸಿಕೊಳ್ಳುವಂಥಾ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ ಕ್ರಿಕೆಟರ್ ಶ್ರೀಶಾಂತ್ ಖಳ ನಟನಾಗಿ ನಟಿಸಿದ್ದಾರೆ. ಲೂಸ್ ಮಾದ ಯೋಗಿ ಕೂಡಾ ಸ್ಪೆಷಲ್ ರೋಲ್ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಕೋಮಲ್ ಪಾಲಿಗೆ ಮರುಹುಟ್ಟಿನಂಥಾ ರೀ ಎಂಟ್ರಿ. ಈ ಸಾಸದಲ್ಲಿ ದೊಡ್ಡ ಮಟ್ಟದಲ್ಲಿಯೇ ಗೆಲ್ಲುವ ಸೂಚನೆ ಟ್ರೈಲರಿಗೆ ಸಿಗುತ್ತಿರೋ ಬೆಂಬಲದ ಮೂಲಕವೇ ಸ್ಪಷ್ಟವಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *