ರಾಜ್ಯದಲ್ಲಿ ಬರಗಾಲ ಇರೋವಾಗ ರೆಸಾರ್ಟ್ ಗೆ ಹೋಗೋದು ಎಷ್ಟು ಸರಿ: ಜಗದೀಶ್ ಶೆಟ್ಟರ್

Public TV
1 Min Read

ಬೆಂಗಳೂರು: ರಾಜ್ಯದಲ್ಲಿ ಬರಗಾಲವಿದೆ. ಈ ಸಮಯದಲ್ಲಿ ರೆಸಾರ್ಟ್ ಗೆ ಹೋಗುವುದು ಎಷ್ಟು ಸರಿ ಎಂದು ಬಿಜೆಪಿ ಮುಖಂಡ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಸಿಎಲ್‍ಪಿ ಸಭೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್‍ನ ಹಣೆ ಬರಹ ಏನು ಎನ್ನುವುದು ಎಲ್ಲರಿಗೂ ಇಂದು ಗೊತ್ತಾಗಿದೆ. ಅವರಿಗೆ ತಮ್ಮ ಶಾಸಕರ ಮೇಲೆ ನಂಬಿಕೆಯೇ ಇಲ್ಲ. ಹೀಗಾಗಿ ರೆಸಾರ್ಟ್ ಗೆ ಅವರನ್ನು ಶಿಫ್ಟ್ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು. ಇದನ್ನು ಓದಿ: ಗುರುಗ್ರಾಮದಲ್ಲಿ ಶಾಸಕರನ್ನು ಇಟ್ಟಿದ್ಯಾಕೆ? ಕೊನೆಗೂ ಉತ್ತರ ನೀಡಿದ ಬಿಎಸ್‍ವೈ

ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ ಈ ರೀತಿ ತಮ್ಮ ಶಾಸಕರನ್ನು ರೆಸಾರ್ಟ್ ಗೆ ಕರೆದುಕೊಂಡು ಹೋಗುತ್ತಿರುವುದು ನಾಚಿಕೆಗೇಡು ಸಂಗತಿ. ಕಾಂಗ್ರೆಸ್‍ನಲ್ಲಿ ಎರಡು ಗುಂಪುಗಳಿದ್ದು, ಹೀಗಾಗಿ ಅವರ ಶಾಸಕರ ಮೇಲೆ ನಂಬಿಕೆ ಇಲ್ಲ. ಅವರಲ್ಲಿ ಒಗ್ಗಟ್ಟಿನ ಕೊರತೆಯಿದೆ. ಇದರಿಂದಾಗಿ ಸಿಎಲ್‍ಪಿ ಸಭೆ ಹೆಸರಿನಲ್ಲಿ ಶಾಸಕರನ್ನು ಕರೆಸಿಕೊಂಡು ರೆಸಾರ್ಟ್ ಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದರು. ಇದನ್ನು ಓದಿ: ಬಿಜೆಪಿ ಕಿರುಕುಳದಿಂದಾಗಿ ರೆಸಾರ್ಟ್​ಗೆ ಹೋಗ್ತಿದ್ದೀವಿ: ದಿನೇಶ್ ಗುಂಡೂರಾವ್

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *