ಜನಪ್ರತಿನಿಧಿಗೆ ಐಟಿ ಬೆದರಿಕೆ: ಸಚಿವ ತುಕಾರಾಂ

Public TV
1 Min Read

ಬಳ್ಳಾರಿ: ಕಂಪ್ಲಿಯ ಓರ್ವ ಜನಪ್ರತಿನಿಧಿಗೆ ಐಟಿ ಇಲಾಖೆ, ನಾವು ಹೇಳಿದ ಹಾಗೆ ಕೇಳಬೇಕು. ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ತಟಸ್ಥರಾಗಿ ಉಳಿಯುವಂತೆ ಬೆದರಿಕೆ ಹಾಕಿದೆ ಎಂದು ಸಚಿವ ತುಕಾರಾಂ ಗಂಭೀರ ಆರೋಪ ಮಾಡಿದ್ದಾರೆ.

ಜಿಲ್ಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಪ್ರಧಾನಿ ನರೇಂದ್ರ ಮೋದಿ ರಿಪಬ್ಲಿಕ್ ಆಪ್ ಇಂಡಿಯಾ ಮಾಡಲು ಹೊರಟ್ಟಿದ್ದಾರೆ. ಹೀಗಾಗಿಯೇ ಐಟಿ ಅಧಿಕಾರಿಗಳು ಆದಾಯಗಳಿಕೆ ಬಗ್ಗೆ ನೋಟಿಸ್ ನೀಡದೇ, ವಿಪಕ್ಷಗಳ ಶಾಸಕರು ಹಾಗೂ ನಾಯಕರಿಗೆ ರಾಜಕೀಯ ವಿಚಾರದಲ್ಲಿ ನೋಟಿಸ್ ನೀಡಿದ್ದಾರೆ. ಎಷ್ಟು ಸಲ ಗೆಲುವು ಸಾಧಿಸಿದ್ದೀರಿ? ಎಷ್ಟು ಮತಗಳ ಅಂತರದಿಂದ ಗೆದ್ದಿದ್ದೀರಿ? ಎಷ್ಟು ಆಸ್ತಿ ಇದೆ ಅಂತಾ ಜನಪ್ರತಿನಿಧಿಗಳಿಗೆ ಐಟಿ ನೋಟಿಸ್ ನೀಡಿರುವುದು ಎಷ್ಟು ಸರಿ ಎಂದು ಐಟಿ ಅಧಿಕಾರಿಗಳ ಕಾರ್ಯವೈಖರಿಗೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಆಸ್ತಿ ಎಷ್ಟಿದೆ? ಹೇಗೆ ಆಸ್ತಿ ಗಳಿಸಿದ್ದೀರಿ ಅನ್ನೋ ಬಗ್ಗೆ ಐಟಿ ಅಧಿಕಾರಿಗಳು ಕೇಳಲಿ. ಆದ್ರೆ ಎಷ್ಟು ಸಾರಿ ಗೆದ್ದಿದ್ದೀರಿ. ಎಷ್ಟು ಮತಗಳಿಂದ ಗೆದ್ದಿದ್ದೀರಿ ಅಂತಾ ನೋಟಿಸ್ ನೀಡೋದು ಎಷ್ಟು ಸರಿ ಎಂದು ಕಿಡಿಕಾರಿದರು. ಅಲ್ಲದೇ ನಮ್ಮ ಆಸ್ತಿ ವಿಚಾರ ಲೋಕಾಯುಕ್ತರು ಕೇಳಲಿ. ಆದರೆ ಐಟಿಯವರಿಗೆ ಈ ವಿಚಾರ ಯಾಕೆ? ನಾವು ಯಾವ ಪಾರ್ಟಿಯಿಂದ ಗೆದ್ದರೇ ಎನೂ? ಐಟಿಯವರಿಗೆ ಯಾಕೆ ಬೇಕು ಇದೆಲ್ಲಾ ಅಂತ ಐಟಿ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದರು. ಅಷ್ಟೇ ಅಲ್ಲದೇ ತಮಗೆ ಮೂರುವರೆ ತಿಂಗಳ ಹಿಂದೆ ಬಂದಿದ್ದ ನೋಟಿಸ್ ಗೆ ಉತ್ತರ ನೀಡಿರುವುದಾಗಿ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *