ದಾವಣಗೆರೆ: ರಾಜ್ಯದ ಪ್ರಖ್ಯಾತ ಉದ್ಯಮಿ, ಬಿ.ಎಸ್ ಚನ್ನಬಸಪ್ಪ ಅಂಡ್ ಸನ್ಸ್ ಜವಳಿ ಮಳಿಗೆಗಳ ಮಾಲೀಕ ಬಿ.ಸಿ ಶಿವಕುಮಾರ್ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಂಗಳೂರು ಹಾಗೂ ದಾವಣಗೆರೆಯ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಕಾಳಿಕಾದೇವಿ ರಸ್ತೆಯ ಬಟ್ಟೆ ಅಂಗಡಿ, ಎವಿಕೆ ರಸ್ತೆ ಹಾಗೂ ಡೆಂಟಲ್ ಕಾಲೇಜ್ ಬಳಿ ಇರುವ ಮಳಿಗೆಗಳ ಮೇಲೆ ದಾಳಿ ನಡೆದಿದ್ದು ಪರಿಶೀಲನೆ ನಡೆಯುತ್ತಿದೆ.