ಬಿಜೆಪಿ ಮುಖಂಡನ ಮನೆ ಮೇಲೆ ರೇಡ್ ಮಾಡಲು ಹೋದ ಅಧಿಕಾರಿಗಳೇ ಕನ್ಫ್ಯೂಸ್!

Public TV
1 Min Read

ರಾಯಚೂರು: ಜಿಲ್ಲೆಯ ಬಿಜೆಪಿ ಮುಖಂಡರೊಬ್ಬರ ಮನೆ ಮೇಲೆ ಐಟಿ ದಾಳಿ ನಡೆಸಲು ಹೋದ ಅಧಿಕಾರಿಗಳು ವಿಳಾಸ ಸಿಗದೇ ಕಕ್ಕಾಬಿಕ್ಕಿಯಾಗಿ ಬೀದಿಯಲ್ಲೇ ಪರದಾಡಿದ ಘಟನೆ ನಡೆದಿದೆ.

ಹೌದು. ಬಿಜೆಪಿ ಮುಖಂಡ ಬಂಡೇಶ್ ಅವರ ಮನೆಗೆ ದಾಳಿ ನಡೆಸಲು ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್, ಸಹಾಯಕ ಆಯುಕ್ತೆ, ಜಿಪಂ ಸಿಇಓ ತಂಡ ಮುಂದಾಗಿತ್ತು. ಆದ್ರೆ ಅಧಿಕಾರಿಗಳೆಲ್ಲ ಬಂದಿರುವುದನ್ನ ನೋಡಿ ಸ್ವತಃ ಬಿಜೆಪಿ ಮುಖಂಡ ಹೊರಗಡೆ ಬಂದು ಹೋದರೂ ಅಧಿಕಾರಿಗಳಿಗೆ ಗೊತ್ತೇ ಆಗ್ಲಿಲ್ಲವಂತೆ.

ಬಾತ್ ರೂಂನಲ್ಲಿ ದುಡ್ಡು ಇಟ್ಟಿದ್ದರೂ, ಸ್ಟೆಪ್ನಿಯಲ್ಲಿ ದುಡ್ಡು ಇಟ್ಟಿದ್ದರೂ ಹುಡುಕಿ ತೆಗೆಯೋ ಐಟಿ ಅಧಿಕಾರಿಗಳಿಗೆ ವಿಳಾಸ ಪತ್ತೆ ಹಚ್ಚೋದು ಕಷ್ಟವಾಗಿದ್ದು, ಸುಮಾರು ಹೊತ್ತು ಕಾದು ನೋಡಿ ಮರಳಿ ಹೋಗಿರುವ ಪ್ರಹಸನ ನಡೆದಿದೆ.

ಇದೇ ವೇಳೆ ಪಕ್ಕದಲ್ಲಿರುವ ಬಿಜೆಪಿ ಮುಖಂಡ ರವಿ ಜಲ್ದಾರ್ ಕಚೇರಿ ಹಾಗೂ ಪರಿಶೀಲನೆ ಮಾಡಿ ಮರಳಿದ್ದಾರೆ. ಇದಕ್ಕೂ ಮುನ್ನ ಮೈತ್ರಿ ಅಭ್ಯರ್ಥಿ ಬಿ.ವಿ.ನಾಯಕ್ ಅಳಿಯ ಜಿ.ಪಂ.ಸದಸ್ಯ ಸಂದೀಪ್ ನಾಯಕ್ ಮನೆ ಮೇಲೆ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿ ಒಟ್ಟು ಎರಡು ಲಕ್ಷ ರೂಪಾಯಿ ಜಪ್ತಿ ಮಾಡಿದ್ದಾರೆ. ಐಟಿ ಅಧಿಕಾರಿಗಳು ಸಹ ದಾಳಿ ನಡೆಸಿ ಮಾಹಿತಿ ಪಡೆದಿದ್ದಾರೆ. ನಗರದ ಲಿಂಗಸುಗೂರು ರಸ್ತೆಯಲ್ಲಿರುವ ಕೃಷ್ಣಾ ಮೇಡೌಸ್ ನಲ್ಲಿರುವ ಮನೆ ಮೇಲೆ ದಾಳಿ ನಡೆದು ಹಣ ಜಪ್ತಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *