ಎಲ್‌ಟಿಟಿಇ ಮುಖ್ಯಸ್ಥ ಜೀವಂತವಾಗಿದ್ದಾನಾ? – ಇದು ತಮಾಷೆ ಎಂದ ಶ್ರೀಲಂಕಾ

Public TV
1 Min Read

ಕೊಲಂಬೋ: ಎಲ್‌ಟಿಟಿಇ (ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಈಳಂ) ಮುಖ್ಯಸ್ಥ ಪ್ರಭಾಕರನ್ ಇನ್ನೂ ಜೀವಂತವಾಗಿದ್ದಾನೆ ಎಂದು ಮಾಜಿ ಕಾಂಗ್ರೆಸ್ ನಾಯಕ ಪಾಜಾ ನೆಡುಮರನ್ ಸೋಮವಾರ ಸ್ಫೋಟಕ ಹೇಳಿಕೆ ನೀಡಿದ್ದರು. ಆದರೆ ಈ ಹೇಳಿಕೆ ಒಂದು ತಮಾಷೆ ಎಂದು ಶ್ರೀಲಂಕಾ (Sri Lanka) ಸೇನೆ ತಳ್ಳಿಹಾಕಿದೆ.

2009ರಲ್ಲಿ ಶ್ರೀಲಂಕಾದ ಸೇನೆಯಿಂದ ಹತ್ಯೆಗೀಡಾಗಿದ್ದ ಎಲ್‌ಟಿಟಿಇ (LTTE) ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್ (Velupillai Prabhakaran) ಇನ್ನೂ ಜೀವಂತವಾಗಿದ್ದಾನೆ, ಅವನು ಈಗ ಕಾಣಿಸಿಕೊಳ್ಳಲು ಅನುಕೂಲಕರ ವಾತಾವರಣವಿದೆ ಎಂದು ನೆಡುಮರನ್ ಹೇಳಿಕೆ ನೀಡಿದ್ದರು. ಈ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಎಲ್‌ಟಿಟಿಇ ಮುಖ್ಯಸ್ಥ 2009ರ ಮೇ 19ರಂದು ಕೊಲ್ಲಲ್ಪಟ್ಟಿದ್ದಾನೆ. ಆತನ ಡಿಎನ್‌ಎ ಇದನ್ನು ಸಾಬೀತುಪಡಿಸಿದೆ ಎಂದು ಶ್ರೀಲಂಕಾದ ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್ ನಳಿನ್ ಹೆರಾತ್ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಮಂಡ್ಯ ಉಸ್ತುವಾರಿ ಆಗಲು ಒಪ್ಪದ ಸಚಿವರು

ಪ್ರಭಾಕರನ್ ಯಾರು?
ಪೂರ್ವ ಮತ್ತು ಉತ್ತರ ಶ್ರೀಲಂಕಾದ ಭಾಗಗಳಲ್ಲಿ ಸ್ವತಂತ್ರ ತಮಿಳು ದೇಶಕ್ಕಾಗಿ 25 ವರ್ಷಗಳ ಕಾಲ ಶ್ರೀಲಂಕಾ ಸರ್ಕಾರದೊಂದಿಗೆ ಎಲ್‌ಟಿಟಿಇ ಹೋರಾಡಿತ್ತು. ಈ ಎಲ್‌ಟಿಟಿಇ ನಿಯಂತ್ರಣಕ್ಕೆ ಆಗಿನ ಪ್ರಧಾನಿ ರಾಜೀವ್ ಗಾಂಧಿ ಸೇನೆಯನ್ನು ಕಳುಹಿಸಿದ್ದರು.

ಶ್ರೀಲಂಕಾ ಸರ್ಕಾರಕ್ಕೆ ಸಹಾಯ ಮಾಡಿದ್ದಕ್ಕೆ ಆತ್ಮಾಹುತಿ ಬಾಂಬ್ ದಾಳಿ ನಡೆಸಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಎಲ್‌ಟಿಟಿಇ ಬೆಂಬಲಿತ ಸದಸ್ಯರು ಹತ್ಯೆಗೈದಿದ್ದರು. ಈ ದಾಳಿಯ ಹಿಂದೆ ಪ್ರಭಾಕರನ್ ಕೈವಾಡವಿತ್ತು. 2009ರಲ್ಲಿ ಸರ್ಕಾರ ಮತ್ತು ಎಲ್‌ಟಿಟಿಇ ನಡುವಿನ ಕಾದಾಟದಲ್ಲಿ ಪ್ರಭಾಕರನ್ ಅವರನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿತ್ತು. ಇದನ್ನೂ ಓದಿ: ಹೆಚ್‍ಡಿಕೆ ಟಕ್ಕರ್ ಕೊಡಲು ಚನ್ನಪಟ್ಟಣದಿಂದ ಕಣಕ್ಕಿಳಿಯುತ್ತಾರಾ ರಮ್ಯಾ?

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *