ಸಮಂತಾ ಆ ಹೇಳಿಕೆಯಿಂದ ಪೈಪೋಟಿಗಿಳಿದ್ರಾ ನಾಗಚೈತನ್ಯ

Public TV
2 Min Read

ಟಾಲಿವುಡ್‌ನಲ್ಲಿ ಸದ್ಯದ ಹಾಟ್ ಟಾಪಿಕ್ ಅಂದರೆ ಮಾಜಿ ದಂಪತಿ ಸಮಂತಾ ಮತ್ತು ನಾಗಚೈತನ್ಯ ವಿಚಾರ. ಈ ಜೋಡಿ ಬೇರೆಯಾಗಿ 1 ವರ್ಷ ಕಳೆಯುತ್ತಾ ಬಂದ್ರು ಮಾಜಿ ದಂಪತಿ ವಿಚಾರ ಟಿಟೌನ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಇದೀಗ ಮುಂಬೈನಲ್ಲಿ ಕಾಣಿಸಿಕೊಂಡಿರುವ ಈ ಮಾಜಿ ದಂಪತಿ ವೃತ್ತಿರಂಗದಲ್ಲಿ ಪೈಪೋಟಿಗಿಳಿದ್ರಾ ಎಂಬ ಗುಸು ಗುಸು ಶುರುವಾಗಿದೆ.

ಒಂದಲ್ಲಾ ಒಂದು ವಿಚಾರ ಸಮಂತಾ ಮತ್ತು ನಾಗಚೈತನ್ಯ ಕುರಿತು ಚರ್ಚೆಯಾಗುತ್ತಲೇ ಇರುತ್ತೆ. ಅಷ್ಟರ ಮಟ್ಟಿಗೆ ಗಾಸಿಪ್ ಮಾಡುವ ಮಂದಿಗೆ ಈ ಜೋಡಿ ಇಷ್ಟವಾಗಿ ಬಿಟ್ಟಿದ್ದಾರೆ. ಡಿವೋರ್ಸ್ ನಂತರ ತಮ್ಮ ವೃತ್ತಿರಂಗದ ಕಡೆ ಈ ಮಾಜಿ ದಂಪತಿ ಬ್ಯುಸಿಯಾಗಿದ್ದಾರೆ. ಸದ್ಯ ಸ್ಯಾಮ್ & ಚೈ ಬಗ್ಗೆ ಹೊಸ ವಿಚಾರವೊಂದು ಚರ್ಚೆಗೆ ಗ್ರಾಸವಾಗಿದೆ. ಸಂದರ್ಶನವೊಂದರಲ್ಲಿ ಸಮಂತಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ನೀಡಿರುವ ಹೇಳಿಕೆಯಿಂದ ಈಗ ಸಮಂತಾ ಮತ್ತು ನಾಗಚೈತನ್ಯ ನಡುವೆ ಪೈಪೋಟಿ ಶುರುವಾಗಿದೆ ಎನ್ನಲಾಗುತ್ತಿದೆ.

`ಕಾಫಿ ವಿತ್ ಕರಣ್’ ಶೋನಲ್ಲಿ ಸಮಂತಾ, ನಾಗಚೈತನ್ಯ ಬಗ್ಗೆ ಮಾತನಾಡಿದ್ದರು. ಸಮಂತಾ ಈ ಹೇಳಿಕೆ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿತ್ತು. ಹಾಗಾಗಿ ಈಗ ಅಸಲಿಗೆ ಇಲ್ಲಿವರೆಗೂ ಸುಮ್ಮನಿದ್ದ ನಾಗಚೈತನ್ಯ ಕಳೆದ ಕೆಲವು ದಿನಗಳಿಂದ ಆಕ್ಟಿವ್ ಆಗುತ್ತಿದ್ದಾರೆ. ಮೇಲ್ನೋಟಕ್ಕೆ ಸಮಂತಾಗೆ ಟಕ್ಕರ್ ಕೊಡೋಕೆ ನಾಗಚೈತನ್ಯ ಸಕಲ ಪ್ರಯತ್ನವೂ ನಡೆಸಿದ್ದಾರೆ ಅನ್ನೋ ಚರ್ಚೆಯಾಗ್ತಿದೆ. ಇದನ್ನೂ ಓದಿ:ಗಾಳಿಪಟ 2 ಸಿನಿಮಾದ ‘ಪ್ರಾಯಶಃ’ ಸಾಂಗ್ ರಿಲೀಸ್ ಮಾಡಿದ ಕಿಚ್ಚ ಸುದೀಪ್

ಸಮಂತಾ ಮುಂಬೈಗೆ ಬಂದಿಳಿಯುವ ಮುನ್ನವೇ ನಾಗಚೈತನ್ಯ ಬಂದಿದ್ದರು. ಅವರ ಮೊದಲ ಬಾಲಿವುಡ್ ಸಿನಿಮಾ `ಲಾಲ್ ಸಿಂಗ್ ಚಡ್ಡಾ’ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ನಾಗಚೈತನ್ಯ ಬಾಲಿವುಡ್ ಫಿಲ್ಮ್ ಮೇಕರ್ ಸಂಜಯ್ ಲೀಲಾ ಬನ್ಸಾಲಿ ಅವರನ್ನ ನಾಗಚೈತನ್ಯ ಭೇಟಿಯಾಗಿ ಬಂದಿದ್ದರು. ಇಬ್ಬರೂ ಸೇರಿ ಸಿನಿಮಾ ಮಾಡುತ್ತಾರೆ ಅನ್ನೋ ಪುಕಾರು ಹಬ್ಬಿದೆ. ಆದರೆ, ಚರ್ಚೆ ಆಗುತ್ತಿರೋ ವಿಷಯವೇ ಬೇರೆ. ಸಮಂತಾ ಹಾಗೂ ನಾಗಚೈತನ್ಯ ಇಬ್ಬರೂ ಕಾಂಪಿಟೇನ್‌ಗೆ ಬಿದ್ದಿದ್ದಾರೆ ಅನ್ನೋ ಗುಸು ಗುಸು ಓಡಾಡುತ್ತಿದೆ. ವೃತ್ತಿರಂಗದಲ್ಲಿ ಸಮಂತಾಗೆ ಟಕ್ಕರ್ ಕೊಡಲು ಮಾಜಿ ಪತಿ ರೆಡಿಯಾಗಿದ್ದಾರೆ ಎನ್ನಲಾಗುತ್ತಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *