ಪ್ರಿಯಾಂಕ್‌ ಇಲಾಖೆಯಲ್ಲಿ ಅಕ್ರಮ, ಹಣಕಾಸು ಆಯೋಗದ 5.5 ಸಾವಿರ ಕೋಟಿ ಅವ್ಯವಹಾರ: ಪಿ ರಾಜೀವ್

1 Min Read

ಬೆಂಗಳೂರು: ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿರುವ 15ನೇ ಹಣಕಾಸು ಆಯೋಗದ ಅನುದಾನದಲ್ಲಿ (15th Finance Commission Grant) 5.5 ಸಾವಿರ ಕೋಟಿ ರೂ ಅಕ್ರಮ ನಡೆದಿದೆ ಎಂದು ಬಿಜೆಪಿ (BJP) ಆರೋಪಿಸಿದೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ ರಾಜೀವ್( P Rajeev), ಸಚಿವ ಪ್ರಿಯಾಂಕ್ ಖರ್ಗೆಯವರ (Priyank Kharge) ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಅಕ್ರಮ ನಡೆದಿದೆ ದೂರಿದರು.

15ನೇ ಹಣಕಾಸು ಆಯೋಗದ ಶಿಫಾರಸ್ಸಿನ ಮೇಲೆ ಬಂದ ಅನುದಾನವನ್ನು ನಿರ್ದಿಷ್ಟ ಗ್ರಾಮ ಪಂಚಾಯಿತಿಗಳಿಗೆ ಕೊಡಲಾಗುತ್ತದೆ. 6 ಸಾವಿರ ಕೋಟಿ ಗ್ರಾಮ ಪಂಚಾಯತ್‌ಗಳಿಗೆ ಕೇಂದ್ರದಿಂದ ಅನುದಾನ ನಿಗದಿ ಆಗಿರುತ್ತದೆ. ಆದರೆ ಪ್ರಿಯಾಂಕ್ ಖರ್ಗೆ ಅವರು ಬೇರೆ ಶಾಸಕರ ಕ್ಷೇತ್ರಗಳ ಗ್ರಾಮಗಳಿಗೆ ಹೋಗಬೇಕಾಗಿದ್ದ ಅನುದಾನವನ್ನು ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿರುವ ಗ್ರಾಮಗಳಿಗೆ ಹಂಚಿಕೆ ಮಾಡಿದ್ದಾರೆ. ಹಾನಗಲ್‌ನಲ್ಲಿ 25 ಗ್ರಾಮ ಪಂಚಾಯತ್‌ಗಳಿಗೆ ಬೇಕಾಬಿಟ್ಟಿಯಾಗಿ ರೀತಿಯ ಅನುದಾನ ಹಂಚಿಕೆ ಮಾಡಲಾಗಿದೆ. ಈ ರೀತಿ ಅನುದಾನವನ್ನು ಬೇರೆ ಕಡೆ ತಿರುಗಿಸಲು ಅವಕಾಶ ಇಲ್ಲ ಎಂದು ಆರೋಪ ಮಾಡಿದರು. ಇದನ್ನೂ ಓದಿ: ಸಿಎಂ ವಿಷಯಾಂತರ ಮಾಡುತ್ತಿರುವುದು ಸರಿಯಲ್ಲ ಸಿಬಿಐಗೆ ಕೊಡಲು ಹಿಂದೇಟು ಯಾಕೆ: ರೆಡ್ಡಿ ಪ್ರಶ್ನೆ

ಈ ರೀತಿ ಬೇಕಾಬಿಟ್ಟಿಯಾಗಿ ಅನುದಾನ ಹಂಚಿಕೆ ಮಾಡಿರುವುದು ಕೇಂದ್ರದ ಗಮನಕ್ಕೆ ಬಂದರೆ ಮುಂದೆ ಅನುದಾನವೇ ಬರೋದಿಲ್ಲ. ಇದರಲ್ಲಿ ಅಧಿಕಾರಿಗಳ ತಪ್ಪು ಇದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. 15ನೇ ಹಣಕಾಸು ಆಯೋಗದ ಅನುದಾನದಲ್ಲಿ ಅವ್ಯವಹಾರ ಆಗಿದ್ದು, ಪ್ರಕರಣವನ್ನು ನಾವು ಕೇಂದ್ರದ ಗಮನಕ್ಕೆ ತರುತ್ತೇವೆ. ಸದನದಲ್ಲೂ ದನಿ ಎತ್ತುತ್ತೇವೆ ಎಂದು ರಾಜೀವ್ತಿಸಿದರು.
Share This Article