ಅಮೆರಿಕದ ಮೇಲೆ ಇರಾನ್‌ ಪ್ರತಿದಾಳಿ ಮಾಡೇ ಮಾಡುತ್ತೆ: ಕರ್ನಲ್ ವೆಂಕಟೇಶ್ ನಾಯ್ಕ್

Public TV
2 Min Read

– 3ನೇ ಮಹಾಯುದ್ಧ ಆಗದಿದ್ರೂ ದೊಡ್ಡ ಆರ್ಥಿಕ ಹೊಡೆತ ಬೀಳುತ್ತೆ

ಬೆಂಗಳೂರು: ಇರಾನ್ ಮೇಲೆ ಅಮೆರಿಕ (America) ದಾಳಿ ಮಾಡಿದ್ದು ಮೂರು ಪರಮಾಣು ಕೇಂದ್ರಗಳನ್ನು ನಾಶ ಮಾಡಿದೆ. ಇಸ್ರೇಲ್ (Israel) ಪರವಾಗಿ ಅಮೆರಿಕ ನಿಂತಿರೋದು ಸಹಜವಾಗಿಯೇ ಇರಾನ್ ಬಲವನ್ನ ಕುಗ್ಗಿಸುವ ಪ್ರಯತ್ನವಾಗಿದೆ.‌ ಇದಕ್ಕೆ ಇರಾನ್ (Iran) ಭೀಕರ ಪ್ರತಿದಾಳಿ ಮಾಡೇ ಮಾಡುತ್ತದೆ ಎಂದು ಕರ್ನಲ್ ವೆಂಕಟೇಶ್ ನಾಯ್ಕ್ (Colonel Venkatesh Nayak) ಅಭಿಪ್ರಾಯಪಟ್ಟಿದ್ದಾರೆ.

ʻಪಬ್ಲಿಕ್‌ ಟಿವಿʼ ಜೊತೆ ಅವರು ಮಾತನಾಡಿದರು. ಈ ವೇಳೆ, ಇರಾನ್ ಪರವಾಗಿ ರಷ್ಯಾ ಮತ್ತು ಚೀನಾ ನೇರವಾಗಿ ಇಲ್ಲದಿದ್ದರೂ ಪರೋಕ್ಷವಾಗಿ ನಿಲ್ಲುವ ಸಾಧ್ಯತೆ ಇದೆ.‌ ಮೂರನೇ ಮಹಾ ಯುದ್ಧವಾಗುವ ಸಾಧ್ಯತೆ ಇಲ್ಲದಿದ್ದರೂ, ಜಾಗತೀಕ ಮಟ್ಟದಲ್ಲಿ ಆರ್ಥಿಕ ಹೊಡೆತವನ್ನ ಕೂಡ ಎದುರಿಸಬೇಕಾಗುತ್ತದೆ. ಭಾರತಕ್ಕೂ ಯುದ್ಧದ ಪರಿಣಾಮ ತಟ್ಟಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇರಾನ್ ಹಾರ್ಮುಝ್ ಜಲಸಂಧಿ ಬಂದ್ ಮಾಡಿದ್ರೆ ಭಾರತಕ್ಕೆ ಭಾರೀ ನಷ್ಟ: ಹಿರಿಯ ಪ್ರಾಧ್ಯಾಪಕ ಎಸ್.ಆರ್ ಕೇಶವ್

ಇರಾನ್‌ಗೆ ಅಮೆರಿಕ ದಾಳಿ ಮಾಡುವ ಶಂಕೆ ಮೊದಲೇ ಇತ್ತು. ಇದರಿಂದಾಗಿ ಯುರೇನಿಯಂನ್ನು ಅದು ಈಗಾಗಲೇ ಸಂಗ್ರಹಿಸಿಟ್ಟಿದೆ. ಇನ್ನೂ ಅಮೆರಿಕದ ದಾಳಿಯಿಂದ ಇರಾನ್‌ನ ಪರಮಾಣು ಘಟಕಗಳಿಗೆ ಹಾನಿಯಾಗಿದೆಯೇ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಸ್ವಲ್ಪ ದಿನ ಕಾದು ನೋಡಬೇಕಿದೆ ಎಂದಿದ್ದಾರೆ.

ಇರಾನ್‌ ಮಿಸೈಲ್‌ ತುಂಬಾ ಶಕ್ತಿಶಾಲಿಯಾಗಿವೆ. ಮುಂದಿನ ದಿನಗಳಲ್ಲಿ ಅಮೆರಿಕ ಯುದ್ಧ ನೌಕೆಗಳು ಹಾಗೂ ಏರ್‌ ಬೇಸ್‌ ಮೇಲೆ ದಾಳಿ ನಡೆಸಲಿದೆ. ಆ ದಾಳಿ ಇದಕ್ಕಿಂತಲೂ ಭೀಕರವಾಗಿರಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಭಾರತಕ್ಕೆ ಇರಾನ್‌ ಹಾಗೂ ಇಸ್ರೇಲ್‌ ಎರಡೂ ಮಿತ್ರ ದೇಶಗಳು. ನಮ್ಮ ದೇಶದ ವಿದೇಶಾಂಗ ನೀತಿ ಗೊಂದಲವಾಗಿದೆ. ಸ್ವಲ್ಪ ವೀಕ್‌ ಎಂದರೂ ತಪ್ಪಾಗಲಿಕ್ಕಿಲ್ಲ. ಈ ಹಿಂದೆ ಭಾರತ ಪ್ಯಾಲೆಸ್ತಿನ್ ಪರವಾಗಿತ್ತು. ಇರಾನ್‌ ನಮಗೆ ಎಷ್ಟೋ ಸಹಾಯ ಮಾಡಿದೆ. ಆರ್ಥಿಕ ದೃಷ್ಟಿಯಿಂದ ತೈಲ ಹಾಗೂ ಗ್ಯಾಸ್‌ ನೋಡಬೇಕು. 50-60 ವರ್ಷದ ಸಂಬಂಧ ನೋಡಬೇಕು. ಇದು ಸರ್ಕಾರಕ್ಕೆ ಬಿಟ್ಟಿರೋ ವಿಚಾರ ಎಂದಿದ್ದಾರೆ.

ಮುಂಬೈ ದಾಳಿ ಆದಾಗ ಕಸಬ್‌ನನ್ನು ಉಗ್ರ ಎಂದು ಇಸ್ರೇಲ್‌ ಘೋಷಿಸಿರಲಿಲ್ಲ. ಹೌತಿ, ಹಮಾಸ್‌ನವರಿಗೆ ಮಾತ್ರ ಉಗ್ರರು ಎಂಬ ಪಟ್ಟ ಕೊಟ್ಟಿದ್ದಾರೆ. ಹಫೀಸ್‌ ಸೈಯ್ಯದ್‌ ವಿಚಾರದಲ್ಲಿ ಅಮೆರಿಕ ಸಹ ಹಾಗೆ, ಅವರ ಮನಸ್ಸಿಗೆ ಯಾರು ಬರ್ತಾರೆ ಅವರು ಮಾತ್ರ ಉಗ್ರರು ಅಂತ ಕರಿತಾರೆ ಎಂದಿದ್ದಾರೆ. ಇದನ್ನೂ ಓದಿ: ವಿಶ್ವದ ಪವರ್‌ಫುಲ್‌ ವೆಪೆನ್‌ ʻಬಂಕರ್‌ ಬಸ್ಟರ್‌ʼ – 14,000 ಕೆಜಿ ತೂಕದ ಬಾಂಬ್‌ ಬಳಸಿ ಇರಾನ್‌ ಪರಮಾಣು ಕೇಂದ್ರದ ಮೇಲೆ ಅಮೆರಿಕ ದಾಳಿ

Share This Article