IPL Retention 2024: 8 ಆಟಗಾರರಿಗೆ CSKಯಿಂದ ಗೇಟ್‌ಪಾಸ್‌ – ರಾಜಸ್ಥಾನ್ ರಾಯಲ್ಸ್‌ನಲ್ಲಿ ಕನ್ನಡಿಗನಿಗೆ ಸ್ಥಾನ

Public TV
2 Min Read

ಮುಂಬೈ: ಡಿಸೆಂಬರ್​ 19ರಂದು ದುಬೈನಲ್ಲಿ ನಡೆಯಲಿರುವ ಐಪಿಎಲ್‌ ಮಿನಿ ಹರಾಜಿಗೂ (IPL 2024 Auction) ಮುನ್ನವೇ ಚೆನ್ನೈ ಸೂಪರ್‌ ಕಿಂಗ್ಸ್‌ ಫ್ರಾಂಚೈಸಿಯು 8 ಆಟಗಾರರಿಗೆ ಗೇಟ್‌ಪಾಸ್‌ ಕೊಟ್ಟಿದೆ. ಅಲ್ಲದೇ ಈ ಬಾರಿಯೂ ಎಂ.ಎಸ್‌ ಧೋನಿ (MS Dhoni) ಅವರ ನಾಯಕತ್ವದಲ್ಲೇ ಸಿಎಸ್‌ಕೆ ತಂಡ ಮುನ್ನಡೆಯಲಿದೆ. ವಿಶೇಷವೆಂದರೆ ಹೊಸ ಮುಖಗಳಿಗೆ ಅದರಲ್ಲೂ ಯುವಕರಿಗೆ ಹೆಚ್ಚಾಗಿ ಮಣೆಹಾಕಿದೆ.

ಇನ್ನೂ ಕಳೆದಬಾರಿಯಂತೆ ಬಲಿಷ್ಠ ಆಟಗಾರರನ್ನು ತಂಡದಲ್ಲೇ ಉಳಿಸಿಕೊಂಡಿರುವ ರಾಜಸ್ತಾನ ರಾಯಲ್ಸ್‌ 9 ಆಟಗಾರರನ್ನು ಬಿಡುಗಡೆ ಮಾಡಿದೆ. ಸಂಜು ಸ್ಯಾಮ್ಸನ್‌ (Sanju Samson) ನಾಯಕನ ಹೊಣೆ ಹೊತ್ತಿದ್ದಾರೆ. ಕಳೆಪೆ ಫಾರ್ಮ್‌ನಲ್ಲಿ ಗುರುತಿಸಿಕೊಂಡ ಆಟಗಾರರನ್ನ ಹೊರದಬ್ಬಿದೆ. ಇನ್ನೂ ಈ ಬಾರಿ ದೇವದತ್‌ ಪಡಿಕಲ್‌ ಅವರನ್ನು ಲಕ್ನೋ ತಂಡಕ್ಕೆ ಕಳುಹಿಸಿಕೊಟ್ಟಿದ್ದು, ಲಕ್ನೋ ಸೂಪರ್‌ ಜೈಂಟ್ಸ್‌ನಲ್ಲಿದ್ದ ವೇಗಿ ಅವೇಶ್‌ ಖಾನ್‌ ಅವರನ್ನು ರಾಜಸ್ಥಾನ್‌ ತಂಡಕ್ಕೆ ಕರೆಸಿಕೊಂಡಿದೆ.

ಐಪಿಎಲ್‌ನ ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದ ರಾಜಸ್ತಾನ್‌ ರಾಯಲ್ಸ್‌ ಆ ನಂತರ ಫೈನಲ್‌ ಪ್ರವೇಶಿಸಿದರೂ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿತ್ತು. 2022ರ ಆವೃತ್ತಿಯಲ್ಲೂ ಪ್ಲೇ ಆಫ್‌ನಿಂದ ಹೊರಗುಳಿದಿತ್ತು. ಆದ್ದರಿಂದ ಈ ಬಾರಿ ಟ್ರೋಫಿ ಗೆಲ್ಲುವತ್ತ ಕಣ್ಣು ಹಾಯಿಸಿದೆ. ದುಬೈನಲ್ಲಿ ನಡೆಯಲಿರುವ ಮಿನಿ ಹರಾಜಿನಲ್ಲಿ ಇನ್ನಷ್ಟು ಆಟಗಾರರನ್ನು ಖರೀದಿಸುವ ಉತ್ಸಾಹ ಹೊಂದಿದೆ.

ಚೆನ್ನೈನಲ್ಲಿ ರಿಟೇನ್‌ ಪ್ಲೇಯರ್ಸ್‌: ಎಂ.ಎಸ್‌ ಧೋನಿ (ನಾಯಕ), ಡಿವೋನ್‌ ಕಾನ್ವೆ, ಡೆವೋನ್‌ ಕಾನ್ವೆ, ಋತುರಾಜ್‌ ಗಾಯಕ್ವಾಡ್‌, ಅಜಿಂಕ್ಯ ರಹಾನೆ, ಶಿವಂ ದುಬೆ, ಶೇಕ್ ರಶೀದ್, ರವೀಂದ್ರ ಜಡೇಜಾ, ಮಿಚೆಲ್‌ ಸ್ಯಾಂಟ್ನರ್‌, ಮೊಯಿನ್‌ ಅಲಿ, ನಿಶಾಂತ್‌ ಸಿಂಧು, ಅಜಯ್‌ ಮಂಡಲ್‌, ರಾಜವರ್ಧನ್ ಹಂಗರಗೇಕರ್, ದೀಪ್‌ ಚಹಾರ್‌, ಮಹೀಶ್‌ ತೀಕ್ಷಣ, ಮುಕೇಶ್‌ ಚೌಧರಿ, ಪ್ರಶಾಂತ್‌ ಸೋಲಂಕಿ, ಸಿಮರ್ಜೀತ್ ಸಿಂಗ್, ತುಷಾರ್‌ ದೇಶ್‌ಪಾಂಡೆ, ಮತೀಶ ಪಥಿರಣ.

ಬಿಡುಗಡೆಗೊಳಿಸಿದ ಪ್ಲೇಯರ್ಸ್‌: ಬೆನ್‌ ಸ್ಟೋಕ್ಸ್, ಅಂಬಟಿ ರಾಯುಡು (ನಿವೃತ್ತಿ), ಡ್ವೈನ್‌ ಪ್ರಿಟೋರಿಯಸ್, ಭಗತ್ ವರ್ಮಾ, ಸುಭ್ರಾಂಶು ಸೇನಾಪತಿ, ಕೈಲ್‌ ಜೇಮಿಸನ್, ಆಕಾಶ್ ಸಿಂಗ್, ಸಿಸಂದಾ ಮಗಲಾ.

ರಾಜಸ್ಥಾನ್‌ ರಾಯಲ್ಸ್‌ ರಿಟೇನ್‌ ಪ್ಲೇಯರ್ಸ್‌: ಸಂಜು ಸ್ಯಾಮ್ಸನ್‌ (ನಾಯಕ), ಜೋಸ್‌ ಬಟ್ಲರ್‌, ಶಿಮ್ರನ್‌ ಹೆಟ್ಮೇಯರ್‌, ಯಶಸ್ವಿ ಜೈಸ್ವಾಲ್‌, ಧ್ರುವ್‌ ಜುರೆಲ್‌, ರಿಯಾನ್‌ ಪರಾಗ್‌, ಡೊನೊವನ್ ಫೆರೆರಾ, ಕುನಾಲ್ ಸಿಂಗ್ ರಾಥೋಡ್, ರವಿಚಂದ್ರನ್‌ ಅಶ್ವಿನ್‌, ಕುಲ್ದೀಪ್‌ ದೇನ್‌, ನವದೀಪ್‌ ಸೈನಿ, ಪ್ರಸಿದ್ಧ್‌ ಕೃಷ್ಣ, ಸಂದೀಪ್‌ ಶರ್ಮಾ, ಟ್ರೆಂಟ್‌ ಬೌಲ್ಟ್‌, ಯಜುವೇಂದ್ರ ಚಾಹಲ್‌, ಆಡಂ ಝಂಪಾ, ಅವೇಶ್‌ ಖಾನ್‌.

ಬಿಡುಗಡೆಗೊಳಿಸಿದ ಪ್ಲೇಯರ್ಸ್‌: ಜೋ ರೂಟ್‌, ಅಬ್ದುಲ್ ಬಸಿತ್, ಜೇಸನ್‌ ಹೋಲ್ಡರ್‌, ಆಕಾಶ್ ವಸಿಷ್ಠ, ಕುಲ್ದೀಪ್‌ ಯಾದವ್‌, ಒಬೆಡ್ ಮೆಕಾಯ್, ಮುರುಗನ್‌ ಅಶ್ವಿನ್‌, ಕೆ.ಸಿ ಕಾರಿಯಪ್ಪ, ಕೆಂ.ಎಂ ಆಸಿಫ್‌.

Share This Article