ಗೆದ್ದು ಬಾ ಆರ್‌ಸಿಬಿ – ಶುಭ ಹಾರೈಸಿದ ಸಿಎಂ ಸಿದ್ದರಾಮಯ್ಯ

Public TV
1 Min Read

– ಪಂಜಾಬ್‌ ಗೆದ್ರೆ ಅವರಿಗೂ ಅಭಿನಂದನೆ

ಗದಗ: ಇಂದು ನಡೆಯಲಿರುವ ಐಪಿಎಲ್ ಫೈನಲ್‌ (IPL 2025 Final) ಪಂದ್ಯದಲ್ಲಿ ಪಂಜಾಬ್‌ (PBKS) ವಿರುದ್ಧ ಆರ್‌ಸಿಬಿ (RCB) ಗೆಲ್ಲಲಿ ಎಂದು ಸಿಎಂ ಸಿದ್ದರಾಮಯ್ಯ ಶುಭ ಹಾರೈಸಿದರು.

ಲಕ್ಕುಂಡಿಯಲ್ಲಿ ಐತಿಹಾಸಿಕ ಪ್ರಾಚ್ಯಾವಶೇಷಗಳ ಉತ್ಖನನಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ವೇಳೆ ಐಪಿಎಲ್ ಫೈನಲ್‌ ಪಂದ್ಯದ ವಿಚಾರವಾಗಿ, ಪಂಜಾಬ್ ನವರು ನಮ್ಮ ಜೊತೆ ಮೊದಲು ಕ್ವಾಲಿಫೈಡ್‌ ಮ್ಯಾಚ್‌ನಲ್ಲಿ 101ಕ್ಕೆ ಔಟ್ ಆಗಿದ್ದರು. ಆದರೆ ನಂತರದಲ್ಲಿ ಮುಂಬೈ ವಿರುದ್ಧ ಗೆದ್ದರು. ಮುಂಬೈ ಸ್ಟ್ರಾಂಗ್ ಟೀಮ್, ಅದರಲ್ಲಿ ಒಳ್ಳೆ ಆಟಗಾರರಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: IPL 2025 Final – ಪಂದ್ಯಕ್ಕೂ ಮುನ್ನವೇ ಮೋದಿ ಸ್ಟೇಡಿಯಂ ಹೊರಗೆ ಸಿಲಿಂಡರ್ ಬ್ಲಾಸ್ಟ್

ಆರ್‌ಸಿಬಿ ನಾಲ್ಕನೆ ಬಾರಿಗೆ ಫೈನಲ್‌ಗೆ ಬಂದಿದೆ. ಈ ಬಾರಿ ಗೆಲ್ಲಲಿ ಎಂದು ಹಾರೈಸುತ್ತೇನೆ. ಗೆದ್ದರೆ ಅಭಿನಂದನೆ ತಿಳಿಸುತ್ತೆನೆ. ಪಂಜಾಜ್ ಗೆದ್ದರೆ ಅವರಿಗೂ ಅಭಿನಂದನೆ ಹೇಳುತ್ತೇನೆ ಎಂದರು. ಇದನ್ನೂ ಓದಿ: ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್ – ಐಪಿಎಲ್ ಫೈನಲ್‌ನಲ್ಲಿ ಆಡಲಿದ್ದಾರೆ ಫಿಲ್ ಸಾಲ್ಟ್

Share This Article