ಮುಂಬೈ ವಿರುದ್ಧದ ಗೆಲುವಿನ ಬಳಿಕ ಆರ್​ಸಿಬಿಗೆ ಶಾಕ್ – ಬಯೋ ಬಬಲ್ ತೊರೆದ ಹರ್ಷಲ್ ಪಟೇಲ್

Public TV
1 Min Read

ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ತಂಡದ ವೇಗಿ ಹರ್ಷಲ್ ಪಟೇಲ್ ಮುಂಬೈ ವಿರುದ್ಧದ ಪಂದ್ಯ ಗೆದ್ದ ಬಳಿಕ ಆರ್​ಸಿಬಿ ತಂಡವನ್ನು ಬಿಟ್ಟು ಹೊರನಡೆದಿದ್ದಾರೆ.

ಹರ್ಷಲ್ ಪಟೇಲ್ ಅವರ ತಂಗಿ ಮರಣ ಹೊಂದಿದ ಪರಿಣಾಮ ತಂಡದ ಬಯೋ ಬಬಲ್ ತೊರೆದು ಮನೆಗೆ ತೆರಳಿದ್ದಾರೆ ಎಂದು ಆರ್​ಸಿಬಿ ಮೂಲಗಳಿಂದ ವರದಿಯಾಗಿದೆ. ಹರ್ಷಲ್ ಪಟೇಲ್ ಮುಂಬೈ ವಿರುದ್ಧದ ಪಂದ್ಯದಲ್ಲಿ 2 ವಿಕೆಟ್ ಕಿತ್ತು 7 ವಿಕೆಟ್‍ಗಳ ಅಂತರದ ಜಯದಲ್ಲಿ ಆರ್​ಸಿಬಿ ಪರ ಮಹತ್ವದ ಪಾತ್ರ ವಹಿಸಿದ್ದರು. ಇದನ್ನೂ ಓದಿ: ಧೋನಿ ಬಳಿಕ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿ ಮ್ಯಾಚ್ ಫಿನಿಶರ್ ಎನಿಸಿಕೊಂಡ ತೆವಾಟಿಯಾ

ಹರ್ಷಲ್ ಪಟೇಲ್ 14ನೇ ಆವೃತ್ತಿಯ ಐಪಿಎಲ್‍ನ ಪರ್ಪಲ್ ಕ್ಯಾಪ್ ಹೋಲ್ಡರ್ ಆಗಿದ್ದು, ಇದೀಗ 15ನೇ ಆವೃತ್ತಿ ಐಪಿಎಲ್‍ನಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದರು. ಬಯೋ ಬಬಲ್ ತೊರೆದಿರುವ ಹರ್ಷಲ್ ಪಟೇಲ್ ಏಪ್ರಿಲ್ 12ರ ಬಳಿಕ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ. ಇದನ್ನೂ ಓದಿ: ರಾವತ್, ಕೊಹ್ಲಿ ಘರ್ಜನೆಗೆ ಮಂಕಾದ ಮುಂಬೈ – ಆರ್​ಸಿಬಿಗೆ 7 ವಿಕೆಟ್‌ಗಳ ಅಂತರದ ಜಯ

ಆರ್​ಸಿಬಿ ತಂಡ ಏಪ್ರಿಲ್ 12 ರಂದು ಚೆನ್ನೈ ವಿರುದ್ಧ ಆಡಲಿದೆ. ಈ ಪಂದ್ಯದ ವೇಳೆ ಹರ್ಷಲ್ ಪಟೇಲ್ ತಂಡ ಸೇರಿಕೊಳ್ಳಲಿದ್ದಾರೆ ಎಂದು ಆರ್​ಸಿಬಿ ಮೂಲಗಳಿಂದ ವರದಿಯಾಗಿದೆ.

 

Share This Article
Leave a Comment

Leave a Reply

Your email address will not be published. Required fields are marked *