ಲೋಕ ಸಮರ ಎಫೆಕ್ಟ್! – ಇಂದಿರಾ ಕ್ಯಾಂಟೀನ್ ಮೆನು ಕೊಂಚ ಚೇಂಜ್

Public TV
1 Min Read

ಬೆಂಗಳೂರು: ಲೋಕಸಭಾ ಚುನಾವಣೆ ಬೆನ್ನಲ್ಲೇ ಇಂದಿರಾ ಕ್ಯಾಂಟೀನ್ ಮೆನು ಕೊಂಚ ಬದಲಾಗಿದ್ದು, ರುಚಿಕರ ಊಟ ಕೊಡುವ ಮೂಲಕ ಮತದಾರ ಸೆಳೆಯುವ ಯತ್ನ ನಡೆಯುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.

ಬ್ರೇಕ್ ಫಾಸ್ಟ್ ಸಮಯದಲ್ಲಿ ನೀಡುತ್ತಿದ್ದ ಚಟ್ನಿ ಬೇಸಿಗೆಯಲ್ಲಿ ಬಹುಬೇಗ ಹಾಳಾಗುತ್ತೆ ಎಂಬ ಕಾರಣದಿಂದ ಚಟ್ನಿ ಬದಲಾಗಿ ಇಡ್ಲಿ ಜೊತೆ ಗಟ್ಟಿ ಸಾಂಬರ್ ಕೊಡಲಿದ್ದಾರೆ. ವಾರಕ್ಕೆ ಎರಡು ದಿನ ಖಾರಬಾತ್ ಸಿಗಲಿದೆ. ಈ ಹಿಂದೆ ಒಂದೇ ದಿನ ಮಾತ್ರ ಖಾರಬಾತ್ ನೀಡಲಾಗುತ್ತಿತ್ತು. ಬಿಸಿಬೇಳೆ ಬಾತ್‍ಗೆ ಖಾರಬೂದಿ ಸಹ ಕೊಡಲು ತೀರ್ಮಾನಿಸಲಾಗಿದೆ. ಇನ್ನು ಸಾಂಬಾರ್‍ನಲ್ಲೂ ಸಾಕಷ್ಟು ಬದಲಾವಣೆಯಾಗಿದ್ದು, ಈ ಹಿಂದೆ ತರಕಾರಿ ಅಡುಗೆ ಸಾಂಬಾರ್ ಮಾಡಲಾಗುತ್ತಿತ್ತು. ಈಗ ಕಾಳುಗಳನ್ನ ಹಾಕಿ ಸಾಂಬರ್ ಮಾಡಲು ನಿರ್ಧರಿಸಿದ್ದಾರೆ.

ರಾತ್ರಿ ಊಟವೂ ಸಹ ಪಲಾವ್, ಅನ್ನಸಾಂಬರ್ ಸಿಗಲಿದೆ. ಮೊದಲು ರಾತ್ರಿ ವೇಳೆ ಪಲಾವ್ ಅಥವಾ ಅನ್ನಸಾಂಬಾರ್ ಇತ್ತು. ಈಗ ಎರಡು ಇರುತ್ತೆ. ಸದ್ಯಕ್ಕಂತೂ ಈ ಬದಲಾವಣೆ ಫಲಾನುಭವಿಗಳಿಗೆ ಖುಷಿ ತಂದಿದೆ. ಇದು ಬಡವರಿಗೆ ಬಗೆ ಬಗೆಯ ಊಟ ಕೊಟ್ಟು ಮತಗಿಟ್ಟಿಸುವ ಚಿಂತನೆಯ ಎಂಬ ಅನುಮಾನ ವ್ಯಕ್ತವಾಗುತ್ತಿದ್ದು, ಚುನಾವಣೆ ಬಳಿಕವೂ ಇದೇ ಗುಣಮಟ್ಟ ಕಾಯ್ತು ಕೊಳ್ಳುತ್ತರಾ ಕಾದು ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *