ಭಾರತೀಯರು ಪ್ರಧಾನಿಯನ್ನು ಬರಿ ನಾಯಕನಾಗಿ ಕಂಡಿಲ್ಲ, ಹೆಮ್ಮೆಯ ಮಗನಾಗಿ ಕಂಡಿದ್ದಾರೆ: ಜಗ್ಗೇಶ್

Public TV
1 Min Read

ಬೆಂಗಳೂರು: ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ ಹಿನ್ನೆಲೆಯಲ್ಲಿ ನವರಸ ನಾಯಕ ಜಗ್ಗೇಶ್ ಪ್ರಧಾನಿ ಮೋದಿಯನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ.

ನಂಬಿಕೆ ದೇವರು. ಜನ ಒಬ್ಬ ವ್ಯಕ್ತಿಯನ್ನು ನಂಬಬೇಕಾದರೆ ಅವನ ನಡೆನುಡಿ ಅಳೆದುತೂಗಿ ನಿರ್ಧರಿಸುತ್ತಾರೆ. ಆ ಮನುಷ್ಯ ಸರಿಕಂಡರೆ ಅವನನ್ನು ಹಿಂಬಾಲಿಸುತ್ತಾರೆ. ಅದರಲ್ಲೂ ನಂಬಿಕೆ ಇಮ್ಮಡಿಯಾದರೆ ಆರಾಧಿಸುತ್ತಾರೆ. ಅದರಲ್ಲೂ ಸಮರ್ಥ ಅನಿಸಿದರೆ ಅವನ ಪೂಜಿಸುತ್ತಾರೆ. ಭಾರತೀಯರು ಮೋದಿಯವರನ್ನು ಬರಿ ನಾಯಕನಾಗಿ ಕಂಡಿಲ್ಲ, ಹೆಮ್ಮೆಯ ಮಗ ಎಂಬಂತೆ ನಿರ್ಧರಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಕಾಯುತ್ತಿದ್ದಾರೆ ಕರುನಾಡ ಜನತೆ. ಅಭಿವೃದ್ಧಿ ಹರಿಕಾರನ ಸಿಂಹ ನಡೆ ಕರುನಾಡ ಕಡೆಗೆ. ಜೋಡಿ ಎತ್ತಾಗಲಿ ರಾಜ್ಯ ಕೇಂದ್ರ ರಾಜಕೀಯವಾಗಿ. ಆಗ ನೋಡಿ ಅಭಿವೃದ್ಧಿಯ ಪರ ಜಾತ್ರೆ. ಇಲ್ಲದಿದ್ದರೆ ಎತ್ತು ಏರಿಗೆ, ಕೋಣ ನೀರಿಗೆ ಹೋದ ಪರಿಸ್ಥಿತಿ. ಬದಲಾಗಲು ಕೈಗೆ ಕೈ ಎತ್ತಿ. ಹಿಡಿಯಿರಿ ಕಮಲ ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *