ಕೇರಳ ಪ್ರವಾಹ ಸಂತ್ರಸ್ತರಿಗೆ ಒಂದು ಪಂದ್ಯದ ಸಂಭಾವನೆ ನೀಡಲು ನಿರ್ಧರಿಸಿದ ಟೀಂ ಇಂಡಿಯಾ

Public TV
1 Min Read

ಲಂಡನ್: ಮಹಾಮಳೆಯಿಂದ ಪ್ರವಾಹ ಎದುರಿಸಿ ನಲುಗಿ ಹೋಗಿರುವ ಕೇರಳ ಸಂತ್ರಸ್ತರಿಗೆ ಟೀಂ ಇಂಡಿಯಾ ಆಟಗಾರರು ನೆರವು ನೀಡಲು ಮುಂದಾಗಿದ್ದು, ಇಂಗ್ಲೆಂಡ್ ವಿರುದ್ಧ 3ನೇ ಟೆಸ್ಟ್ ಪಂದ್ಯದ ಸಂಪೂರ್ಣ ಸಂಭಾವನೆ ನೀಡುವುದಾಗಿ ನಾಯಕರ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.

3ನೇ ಟೆಸ್ಟ್ ಪಂದ್ಯದ ಬಳಿಕ ಮಾತನಾಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ತಂಡದ ಎಲ್ಲಾ ಆಟಗಾರರು ಕೇರಳ ಪ್ರವಾಹದಲ್ಲಿ ಸಂತ್ರಸ್ತರಾಗಿರುವ ಜನರ ನೆರವಿಗೆ ತಮ್ಮ ಪಂದ್ಯದ ಸಂಭಾವನೆಯನ್ನು ನೀಡಲು ಮುಂದಾಗಿರುವುದಾಗಿ ತಿಳಿಸಿದ್ದರು.

ಸದ್ಯ ಟೀಂ ಇಂಡಿಯಾ ತಂಡದ ಆಡುವ 11ರ ಬಳಗದಲ್ಲಿರುವ ಪ್ರತಿ ಆಟಗಾರ ಟೆಸ್ಟ್ ಪಂದ್ಯವೊಂದಕ್ಕೆ 15 ಲಕ್ಷ ರೂ. ಸಂಭಾವನೆ ಪಡೆಯುತ್ತಾರೆ. ಉಳಿದ ಆಟಗಾರರು ಇದರಲ್ಲಿ ಅರ್ಧ ಮೊತ್ತ ಪಡೆಯುತ್ತಾರೆ. ಎಲ್ಲಾ ಆಟಗಾರರ ಸಂಭಾವನೆ ಸುಮಾರು 2 ಕೋಟಿ ರೂ. ಆಗಲಿದೆ.

ವಿಶ್ವದ ಶ್ರೀಮಂತರ ಕ್ರಿಕೆಟ್ ಸಂಸ್ಥೆ ಎಂಬ ಹೆಗ್ಗಳಿಕೆ ಗಳಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರವಾಹ ಸಂತ್ರಸ್ತರಿಗೆ ಯಾವುದೇ ಪರಿಹಾರವನ್ನು ಘೋಷಿಸದಿದ್ದರೂ ಟೀಂ ಇಂಡಿಯಾ ಆಟಗಾರರು ನೆರವು ನೀಡಲು ಮುಂದಾಗಿರುವುದು ಹಲವರ ಮೆಚ್ಚುಗೆಗೆ ಕಾರಣವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *