ಮಾಯಾವತಿ ಸಹೋದರನ 400 ಕೋಟಿ ರೂ. ಮೌಲ್ಯದ ಬೇನಾಮಿ ಆಸ್ತಿ ಜಪ್ತಿ

Public TV
1 Min Read

ನವದೆಹಲಿ: ಬಹುಜನ ಸಮಾಜವಾದಿ ಪಕ್ಷ (ಬಿಎಸ್‍ಪಿ) ನಾಯಕಿ ಮಾಯಾವತಿ, ಸಹೋದರ ಹಾಗೂ ಅವರ ಪತ್ನಿಗೆ ಸೇರಿದ್ದ 400 ಕೋಟಿ ರೂ. ಮೌಲ್ಯದ ಬೆನಾಮಿ ಆಸ್ತಿಯನ್ನು ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡಿದೆ.

ಮಾಯಾವತಿ ಸಹೋದರ, ಬಿಎಸ್‍ಪಿ ರಾಷ್ಟ್ರೀಯ ಉಪಾಧ್ಯಕ್ಷ ಆನಂದ್ ಕುಮಾರ್ ಮತ್ತು ಅವರ ಪತ್ನಿ ಹೆಸರಿನಲ್ಲಿ 7 ಎಕರೆ ಆಸ್ತಿ ಇತ್ತು. ಅಕ್ರಮ ಆಸ್ತಿಗಳಿಕೆ ಪ್ರರಣದ ಅಡಿ ಈ ಜಮೀನನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿಕೊಂಡಿದೆ. ಈ ಜಮೀನಿನ ಮೌಲ್ಯವನ್ನು 400 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಬೇನಾಮಿ ಆಸ್ತಿ ವಹಿವಾಟು ನಿಷೇಧ ಕಾಯ್ದೆ 1988ರ ಸೆಕ್ಷನ್ 24(3)ರ ಅಡಿ ದೆಹಲಿಯ ಆದಾಯ ತೆರಿಗೆ ಇಲಾಖೆಯು ಜುಲೈ 16ರಂದು ಅಕ್ರಮ ಆಸ್ತಿ ಜಪ್ತಿಗೆ ಆದೇಶ ಹೊರಡಿಸಿತ್ತು. ಈ ನಿಟ್ಟಿನಲ್ಲಿ ಬೇನಾಮಿ ನಿಷೇಧ ಘಟಕವು (ಬಿಪಿಯು) ಇಂದು ಆನಂದ್ ಕುಮಾರ್ ಅವರಿಗೆ ಸೇರಿದ್ದ ಆಸ್ತಿಯನ್ನು ವಶಕ್ಕೆ ಪಡೆದಿದೆ.

ಆನಂದ್‍ಕುಮಾರ್ ಅವರ ಆಸ್ತಿ ಒಟ್ಟು 28,328.07 ಚ.ಮೀ ಅಳತೆ ಹೊಂದಿದೆ. ಇದರ ಪ್ರಸ್ತುತ ಮೌಲ್ಯವು 400 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಬೇನಾಮಿ ಕಾಯ್ದೆಯ ಪ್ರಕಾರ ಆರೋಪ ಸಾಬೀತಾದರೆ ದೋಷಿಗಳು 7 ವರ್ಷ ಕಠಿಣ ಶಿಕ್ಷಗೆ ಗುರಿಯಾಗುತ್ತಾರೆ. ಅಷ್ಟೇ ಅಲ್ಲದೆ ಅವರ ಆಸ್ತಿಯ ಶೇ.25ರಷ್ಟು ದಂಡವನ್ನು ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *