ಜಯನಗರ ಗೆಲುವು ನಿರೀಕ್ಷಿತ, ಕಾಂಗ್ರೆಸ್ ಮೇಲೆ ಅನುಕಂಪ ಇದೆ: ಸಿದ್ದರಾಮಯ್ಯ

Public TV
1 Min Read

ಮೈಸೂರು: ಜಯನಗರದಲ್ಲಿ ಸೋಮವಾರ ನಡೆದ ಚುನಾವಣೆಗೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ರವರು ನಮ್ಮ ಗೆಲುವು ನಿರೀಕ್ಷಿತ ಎಂಬ ಹೇಳಿಕೆಯನ್ನ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಿಂದೆ ಚುನಾವಣೆ ನಡೆದಿದ್ದರೂ ನಾವೇ ಗೆಲ್ಲುತ್ತಿದ್ದೇವು, ಈಗಲೂ ನಾವೇ ಗೆಲ್ಲುತ್ತಿದ್ದೇವೆ ಎಂದು ತಿಳಿಸಿದರು. ಕಾರಣ ಬಿಜೆಪಿ ಅಭ್ಯರ್ಥಿಗಿಂತ ನಮ್ಮ ಅಭ್ಯರ್ಥಿ ತುಂಬಾ ಆಕ್ಟಿವ್ ಆಗಿದ್ದಾರೆ. ಅಲ್ಲದೆ ನಮ್ಮ ಅಭ್ಯರ್ಥಿ ಒಳ್ಳೆಯ ಕೆಲಸ ಮಾಡುತ್ತಾ ಚುರುಕಾಗಿ ಒಡಾಡುತ್ತಾರೆ. ಇದು ನಮ್ಮ ನಿರೀಕ್ಷಿತ ಫಲಿತಾಂಶ ಎಂದು ಹೇಳಿದರು.

ಜನರು ಬಿಜೆಪಿಯ ಬಗ್ಗೆ ಯಾವುದೇ ಕಾರಣಕ್ಕೂ ಅನುಕಂಪ ಹೊಂದಿಲ್ಲ, ಅನುಕಂಪ ಇರುವುದು ಕಾಂಗ್ರೆಸ್ ಮೇಲೆ. 78 ಸ್ಥಾನ ಬಂದರು ಅಧಿಕಾರಕ್ಕಾಗಿ ಅಡ್ಡದಾರಿ ಹಿಡಿಯಲಿಲ್ಲ ಎಂಬ ಅನುಕಂಪ ನಮ್ಮ ಮೇಲಿದೆ ಎಂದು ತಿಳಿಸಿದರು.

ಬಿಜೆಪಿ ಬಹುಮತ ಬರದಿದ್ದರು ಅಧಿಕಾರಕ್ಕಾಗಿ ಅಡ್ಡದಾರಿ ಹಿಡಿಯಲು ಪ್ರಯತ್ನಿಸಿತು. ನಮ್ಮ ಇಬ್ಬರು ಶಾಸಕರನ್ನು ಬಿಜೆಪಿ ಬುಕ್ ಮಾಡಿತ್ತು, ಆದರೆ ಬಹುಮತ ಬಾರದ ಕಾರಣ ಅವರನ್ನು ವಾಪಸ್ ಕಳಿಸಿತ್ತು. ಇಂಥವರ ಮೇಲೆ ಜನ ಅನುಕಂಪ ತೋರಿಸಲು ಹೇಗೆ ಸಾದ್ಯ, ಹಾಗಾಗಿ ಗೆಲುವು ನಮ್ಮದೇ ಎಂಬ ದೃಢವಿಶ್ವಾಸ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *