ರಾಯಚೂರು: ದಕ್ಷಿಣ ಕನ್ನಡದ ಜಿಲ್ಲೆಯ ಸಂಸ್ಕೃತಿ ನಿಜವಾದ ಸಂಸ್ಕೃತಿ. ಕೊಲೆಮಾಡುವ ಸಂಸ್ಕೃತಿ ನಮ್ಮದಲ್ಲ, ಒಬ್ಬರಿಗೊಬ್ಬರು ಜೀವ ಕೊಡುವ ಸಂಸ್ಕೃತಿ ನಮ್ಮದು ಅಂತ ಸಚಿವ ಯುಟಿ ಖಾದರ್ ಹೇಳಿದ್ದಾರೆ.
ರಾಯಚೂರಿನ ಸಿಂಧನೂರಿನಲ್ಲಿ ಮಾತನಾಡಿದ ಸಚಿವ ಖಾದರ್ ಕೇವಲ ಶೇ.10 ರಷ್ಟು ಜನ ಮಾತ್ರ ಕೋಮುವಾದ ಸಂಬಂಧ ಹಲ್ಲೆ ಮಾಡುತ್ತಿದ್ದಾರೆ. ಅವರು ಯಾರೇ ಇದ್ದರೂ ಅವರ ವಿರುದ್ದ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಶರತ್ ಕೊಲೆ ಆರೋಪಿಗಳನ್ನ ಶೀಘ್ರದಲ್ಲಿ ಪತ್ತೆ ಹಚ್ಚಲು ಪೊಲೀಸರಿಗೆ ಸೂಚಿಸಿದ್ದೇವೆ ಅಂತ ತಿಳಿಸಿದರು.
ಗುಜರಾತ್ ನ ಶಾಸಕರಿಗೆ ಬೆದರಿಕೆ ಹಾಗೂ ಆಮಿಷ ಒಡ್ಡಿದ್ದರಿಂದ ರಾಜ್ಯದಲ್ಲಿ ರಕ್ಷಣೆ ನೀಡಲಾಗಿತ್ತು. ಸೇಡಿನ ರಾಜಕಾರಣ ಮಾಡಿರುವ ಬಿಜೆಪಿ ಡಿಕೆಶಿ ಮೇಲೆ ಐಟಿ ದಾಳಿ ಮಾಡಿಸಿದೆ ಅಂತ ಆರೋಪಿಸಿದರು.