ಏರ್ ಸ್ಟ್ರೈಕ್ ಮಾಡಿದ್ದು ಉಗ್ರರ ಮೇಲೋ? ಮರಗಳ ಮೇಲೋ?: ಸಿಧು ಟಾಂಗ್

Public TV
1 Min Read

ನವದೆಹಲಿ: ದಿನದಿಂದ ದಿನಕ್ಕೆ ಪಾಕಿಸ್ತಾನದ ಬಾಲಕೋಟ್‍ನಲ್ಲಿ ಉಗ್ರರ ನೆಲೆ ಮೇಲೆ ಭಾರತೀಯ ವಾಯುಪಡೆ ದಾಳಿ ಮಾಡಿರುವ ವಿಚಾರ ರಾಜಕೀಯವಾಗುತ್ತಿದೆ. ಈ ಮಧ್ಯೆ ಏರ್ ಸ್ಟ್ರೈಕ್ ಮಾಡಿರೋದು ಉಗ್ರರ ಮೇಲೋ? ಅಥವಾ ಮರಗಳ ಮೇಲೋ? ಅಂತ ಪಂಜಾಬ್ ಸರ್ಕಾರದ ಮಂತ್ರಿ ನವಜೋತ್ ಸಿಂಗ್ ಸಿಧು ಟ್ವೀಟ್ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ನವಜೋತ್ ಸಿಂಗ್ ಸಿಧು, ರಾಜಕೀಯಕ್ಕೆ ಸೇನೆಯನ್ನು ಬಳಸಲಾಗುತ್ತಿದೆ. ಇದನ್ನು ನಿಲ್ಲಿಸಿ, ನೀವು ಚುನಾವಣಾ ತಂತ್ರವಾಗಿ ಏರ್ ಸ್ಟ್ರೈಕ್ ಬಳಸಿಕೊಳ್ಳತ್ತಿದ್ದಿರಾ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೆ ಸರ್ಜಿಕಲ್ ಸ್ಟ್ರೈಕ್ 2.0 ಅಲ್ಲಿ ನಿಜವಾಗಿಯೂ 300 ಉಗ್ರರು ಮೃತಪಟ್ಟಿದ್ದಾರಾ? ದಾಳಿ ಉಗ್ರ ಮೇಲೆ ನಡೆದಿದೆಯೋ ಅಥವಾ ಮರಗಳ ಮೇಲೋ? ಅಂತ ವ್ಯಂಗ್ಯವಾಡಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?
300 ಮಂದಿ ಉಗ್ರರು ಮೃತಪಟ್ಟಿದ್ದಾರೆ ಎಂಬುದು ನಿಜಾನಾ ಅಥವಾ ಸುಳ್ಳಾ? ಇದರ ಉದ್ದೇಶವೇನು? ಏರ್ ಸ್ಟ್ರೈಕ್ ಮೂಲಕ ಉಗ್ರರನ್ನು ನೆಲಸಮ ಮಾಡಿದ್ದಿರೋ ಅಥವಾ ಮರಗಳನ್ನು ಉರುಳಿದ್ದಿರೋ? ಇದು ಚುನಾವಣಾ ತಂತ್ರನಾ? ಶತ್ರುಗಳ ವಿರುದ್ಧ ಹೋರಾಡುವಲ್ಲಿ ನಮ್ಮ ದೇಶಕ್ಕೆ ಮೋಸವಾಗಿದೆ. ದಯವಿಟ್ಟು ಸೈನಿಕರನ್ನು ರಾಜಕೀಯಕ್ಕೆ ಬಳಸಿಕೊಳ್ಳಬೇಡಿ. ಸೇನೆಯೂ ಕೂಡ ನಾಡಿನಷ್ಟೇ ಪವಿತ್ರವಾದದ್ದು ಎಂದು ಬರೆದು ಬಿಜೆಪಿ ನಾಯಕರ ಫೋಟೋಗಳನ್ನು ಹಾಕಿ ಟ್ವೀಟ್ ಮಾಡಿದ್ದಾರೆ.

ಒಂದು ಕಡೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ದಾಳಿಯಲ್ಲಿ 250ಕ್ಕೂ ಅಧಿಕ ಉಗ್ರರನ್ನು ಹತ್ಯೆಗೈಯಲಾಗಿದೆ ಎಂದು ಹೇಳಿದ್ದರು. ಇನ್ನೊಂದೆಡೆ ಕೇಂದ್ರ ಸಚಿವ ದಾಳಿಯಲ್ಲಿ ಯಾವುದೇ ಹಾನಿಯಾಗಿಲ್ಲ ಎಂದು ಹೇಳಿಕೆ ನೀಡಿದ್ದರು. ಅಲ್ಲದೆ ಈಗಾಗಲೇ ಪ್ರತಿಪಕ್ಷ ನಾಯಕರು ಏರ್ ಸ್ಟ್ರೈಕ್ ಬಗ್ಗೆ ಮಾಹಿತಿ ನೀಡಿ ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ. ಅಲ್ಲದೆ ಕೆಲವು ವಿರೋಧ ಪಕ್ಷ ನಾಯಕರು ಏರ್ ಸ್ಟ್ರೈಕ್ ಒಂದು ರಾಜಕೀಯ ಗಿಮಿಕ್ ಎಂದು ಮೋದಿ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಾ ಇದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *