ನಾನೇನು ಸಾಧಾರಣ ಮನುಷ್ಯ ಅಲ್ಲ, ನನಗಾಗಿ ಮೂರು ದೇಶದ ಪ್ರಧಾನಿಗಳು ಕಾಯುತ್ತಿದ್ರು- ಕೊತ್ತೂರು ಮಂಜುನಾಥ್

Public TV
1 Min Read

ಕೋಲಾರ: ಅಧಿಕಾರವನ್ನು ಕೇಳಿ ಪಡೆಯಲು ನಾನೇನು ಸಾಧಾರಣ ಮನುಷ್ಯನಲ್ಲ. ನನಗಾಗಿ ಮೂರು ದೇಶದ ಪ್ರಧಾನಿಗಳು ಕಾಯುತ್ತಿದ್ದರು. ಅಧಿಕಾರ ಕೇಳಿಕೊಂಡು ಬರುವ ಸಣ್ಣ ವ್ಯಕ್ತಿ ನಾನಲ್ಲ ಎಂದು ಮುಳುಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ ಹೇಳಿದ್ದಾರೆ.

ಅಧಿಕಾರಕ್ಕಾಗಿ ನಾನು ಯಾರ ಮನೆಯ ಬಾಗಿಲಿಗೂ ಹೋಗುವವನಲ್ಲ. ನಾನಾಗಿಯೇ ವಿಧಾನ ಪರಿಷತ್ ಸ್ಥಾನ ಕೊಡಿ ಎಂದು ಯಾರನ್ನೂ ಕೇಳಿಲ್ಲ. ಅದಾಗೆ ಬಂದರೆ ಸ್ವೀಕರಿಸುತ್ತೇನೆ ಎಂದು ತಮ್ಮ ಮನದಾಳದ ಇಂಗಿತವನ್ನು ಹೊರಹಾಕಿದ್ದಾರೆ.

ನನಗೊಂದು ಸ್ಪೇಶಲ್ ಕ್ಯಾರೆಕ್ಟರ್ ಇದೆ. ನನಗಾಗಿ ಕಾಯುವವರು ಬೇರೆ ಇದ್ದಾರೆ, ಎಂದು ಹೇಳುವ ಮೂಲಕ ಪರೋಕ್ಷವಾಗಿ ಹೈಕಮಾಂಡ್ ಗೆ ಟಾಂಗ್ ನೀಡಿದ ಮಂಜುನಾಥ್, ಮುಂದಿನ ಚುನಾವಣೆಯಲ್ಲಿ ಹೈಕಮಾಂಡ್ ಒಪ್ಪಿದ್ರೆ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವೆ ಅಂತಾ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *